Gl
ಕೃಷಿ

ಪುತ್ತೂರು: ಆನೆ ಹಾವಳಿ ವಿಚಾರ ವಲಯ ಅರಣ್ಯ ಸಂರಕ್ಷಣಾಧಿಕಾರಿಗೇ ತಿಳಿದೇ ಇಲ್ಲವಂತೆ!! ವರ್ಷ ಸರಿದರೂ ಪರಿಹಾರ ಕಾಣದ ಆನೆ ಉಪಟಳಕ್ಕೆ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ರು ಕಾರಣ!!

ಪುತ್ತೂರು: ಕಳೆದೊಂದು ವರ್ಷದಿಂದ ಪುತ್ತೂರಿನ ಗ್ರಾಮಾಂತರ ಭಾಗದಲ್ಲಿ ಒಂಟಿ ಆನೆಯ ಉಪಟಳ ಮಿತಿಮೀರಿದೆ. ಒಬ್ಬಾಕೆ ಮಹಿಳೆಯೂ ತನ್ನ ಜೀವವನ್ನು ಕಳೆದುಕೊಂಡಿದ್ದಾರೆ. ಇದಕ್ಕೊಂದು ಪರಿಹಾರ ನೀಡಿ ಎಂಬ ಸಾರ್ವಜನಿಕರ ಮನವಿ, ಒತ್ತಾಯ, ಆಕ್ರೋಶ ಬೆನ್ನಿಂದ ಬೆನ್ನು ಆಗುತ್ತಲೇ ಇದೆ. ಇಷ್ಟೆಲ್ಲ ಆಗುತ್ತಿದ್ದರೂ ಇದರ ಬಗ್ಗೆ ಮಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ಅವರಿಗೆ ಮಾಹಿತಿಯೇ ಇಲ್ಲವಂತೆ!!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಳೆದೊಂದು ವರ್ಷದಿಂದ ಪುತ್ತೂರಿನ ಗ್ರಾಮಾಂತರ ಭಾಗದಲ್ಲಿ ಒಂಟಿ ಆನೆಯ ಉಪಟಳ ಮಿತಿಮೀರಿದೆ. ಒಬ್ಬಾಕೆ ಮಹಿಳೆಯೂ ತನ್ನ ಜೀವವನ್ನು ಕಳೆದುಕೊಂಡಿದ್ದಾರೆ. ಇದಕ್ಕೊಂದು ಪರಿಹಾರ ನೀಡಿ ಎಂಬ ಸಾರ್ವಜನಿಕರ ಮನವಿ, ಒತ್ತಾಯ, ಆಕ್ರೋಶ ಬೆನ್ನಿಂದ ಬೆನ್ನು ಆಗುತ್ತಲೇ ಇದೆ. ಇಷ್ಟೆಲ್ಲ ಆಗುತ್ತಿದ್ದರೂ ಇದರ ಬಗ್ಗೆ ಮಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ಅವರಿಗೆ ಮಾಹಿತಿಯೇ ಇಲ್ಲವಂತೆ!!!

Pashupathi

ಹೀಗೊಂದು ಮಾಹಿತಿಯನ್ನು ಭಾರತೀಯ ಕಿಸಾನ್ ಸಂಘದ ಮಂಗಳೂರು ವಿಭಾಗದ ಅಧ್ಯಕ್ಷ ಎಂ.ಜಿ. ಸತ್ಯನಾರಾಯಣ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

akshaya college

ಕೊಳ್ತಿಗೆಯಲ್ಲಿ ರಬ್ಬರ್ ಟ್ಯಾಪಿಂಗಿನ ಮಹಿಳೆಯ ಸೆಲ್ವಮ್ ಅವರು ಆನೆ ದಾಳಿಗೆ ದಾರುಣವಾಗಿ ಮೃತಪಟ್ಟಿದ್ದರು. ಆನೆ ದಾಳಿಗೆ ಅನೇಕರ ಕೃಷಿ ನೆಲಕಚ್ಚಿವೆ. ಕೃಷಿ ಕಾಯಕ ನಡೆಸಲು ಭಯ ಆವರಿಸಿಕೊಂಡಿದೆ. ಹೀಗಿರುವಾಗ ಆನೆಯನ್ನು ಸೆರೆ ಹಿಡಿದು, ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂಬ ಮನವಿ, ಆಗ್ರಹಗಳು ಕೇಳಿಬಂದವು. ಆ ಸಂದರ್ಭ ಆನೆಯನ್ನು ನೋಡಿದವರು, ಆನೆಯ ಕಾಲಿನಲ್ಲಿ ಸಂಕೋಲೆಯಿಂದಾದ ಗುರುತು ಇರುವುದನ್ನು ಖಚಿತಪಡಿಸಿದ್ದಾರೆ. ಹಾಗಾಗಿ ಇದು ಸಾಕಾನೆಯೇ ಆಗಿದೆ ಎನ್ನುವುದನ್ನು ಖಚಿತ ಪಡಿಸಿದ್ದಾರೆ. ಆದರೆ ಯಾವೊಂದು ಕ್ರಮವೂ ಆಗಿಲ್ಲ ಎಂದು ಆರೋಪಿಸಿದರು.

ಆನೆ ದಾಳಿ ಹಿನ್ನೆಲೆಯಲ್ಲಿ ಮಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ಅವರನ್ನು ಭೇಟಿ ಮಾಡಲಾಗಿದೆ. ಅವರಿಗೆ ಮನವಿ ನೀಡಿದ ಸಂದರ್ಭ, ಆನೆ ಉಪಟಳದ ಅಧಿಕೃತ ಮಾಹಿತಿಯೇ ತನಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಆನೆ ಸೆರೆಹಿಡಿಯಲು 24 ಗಂಟೆಗಳ ಕಾಲಾವಕಾಶ ಸಾಕು. ಆದರೆ ಇದಕ್ಕೆ ವರದಿಯನ್ನು ತಯಾರಿಸಬೇಕಾಗಿದೆ. ಹಾಗಾಗಿ ಸುಮಾರು 2 ವಾರಗಳ ಕಾಲಾವಕಾಶದ ಅಗತ್ಯವಿದೆ ಎಂದಿದ್ದಾರೆ ಎಂದು ವಿವರಿಸಿದರು.

ಕಾವು, ಅರಿಯಡ್ಕ, ಮಾಡ್ನೂರು, ಪೆರ್ಲಂಪಾಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಯ ಚಲನ ವಲನಗಳ ಕೂಲಂಕಷ ಪರಿಶೀಲನೆ ನಡೆಸಿ, ವರದಿ ಪಡೆದುಕೊಳ್ಳುತ್ತಾರೆ. ಬಳಿಕ ಆನೆ ಶಿಬಿರಗಳಿಂದ ಆನೆಯನ್ನು ತರಿಸಿಕೊಂಡು, ಆನೆಯನ್ನು ಸೆರೆಹಿಡಿಯುವ ತಂಡ ಪುತ್ತೂರಿನ ಗ್ರಾಮಾಂತರ ಪ್ರದೇಶಗಳಿಗೆ ಆಗಮಿಸಲಿದೆ. ಇದರೊಂದಿಗೆ ಕಾಡಾನೆಯ ಹಾವಳಿಗೊಳಪಟ್ಟ ರೈತರ ಸಭೆಯನ್ನು ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಪುತ್ತೂರಿನಲ್ಲೇ ಕರೆದು, ನೇರ ಮಾತುಕತೆ ಹಾಗೂ ಮಾಹಿತಿಯನ್ನು ಪಡೆದುಕೊಳ್ಳುವ ಆಶ್ವಾಸನೆಯನ್ನು ನೀಡಿದ್ದಾರೆ ಎಂದರು.

ವರದಿಗಳೇನಾದವು?
ಗ್ರಾಮ ಪಂಚಾಯತ್ ಸಭೆಯಲ್ಲಿ ಆನೆ ಹಾವಳಿ ತಡೆಗಟ್ಟುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಗೂ ಈ ಬಗ್ಗೆ ಮನವಿ ನೀಡಲಾಗಿದೆ. ಸೆಲ್ವಮ್ ಮೃತಪಟ್ಟಾಗ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈ ಎಲ್ಲಾ ಮಾಹಿತಿಗಳು ಆನೆ ಹಿಡಿಯಲು ಕ್ರಮ ಕೈಗೊಳ್ಳಬೇಕಾದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ತಲುಪಲೇ ಇಲ್ಲ ಅಂದರೆ ಏನರ್ಥ? ಸಭೆಯ ನಿರ್ಣಯ ಏನಾಯಿತು? ಮನವಿಗೆ ಕಿಮ್ಮತ್ತೇ ಸಿಗಲಿಲ್ಲವೇ? ಇಲ್ಲ ಕೃಷಿಕರ ಕಣ್ಣಿಗೆ ಮಣ್ಣೆರಚಲು ಮಾಡಿದ ನಾಟಕವೇ ಈ ನಿರ್ಣಯ, ಮನವಿ, ಭರವಸೆಗಳು…

ವಲಯ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ ಭರವಸೆಯೂ ಅದೇ ಹಾದಿ ಹಿಡಿಯದಿದ್ದರೆ ಸಾಕು. ಒಂದು ವೇಳೆ ಅವರು ನೀಡಿದ ಭರವಸೆ ನಿಜವಾದರೆ, ಮುಂದಿನ ಎರಡು ವಾರದಲ್ಲಿ ಆನೆ ಹಾವಳಿಗೆ ಸೂಕ್ತ ಪರಿಹಾರ ಸಿಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರಾಮ ಪ್ರಸಾದ್, ತಾಲೂಕು ಅಧ್ಯಕ್ಷ ಜನಾರ್ದನ ರೈ, ದಿವ್ಯಪ್ರಸಾದ್ ಕಾವು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ | ಫಲಾನುಭವಿ ರೈತರು ಯೋಜನೆ ಪಡೆದುಕೊಳ್ಳಲು ಅಗತ್ಯ ಮಾಹಿತಿ ಇಲ್ಲಿದೆ…

ಕೇಂದ್ರ ಸರ್ಕಾರ ರೈತರಿಗಾಗಿ 2019 ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್…