ಪುತ್ತೂರು: ಹಸಿ ತ್ಯಾಜ್ಯದಿಂದ ನಿರ್ಮಾಣಗೊಳ್ಳಲಿರುವ ಸಿ ಎನ್ ಜಿ ಉತ್ಪಾದನ ಘಟಕವನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಭಾನುವಾರ ಬನ್ನೂರು ಡಂಪಿಂಗ್ ಯಾರ್ಡಿನಲ್ಲಿ ಲೋಕಾರ್ಪಣೆಗೊಳಿಸಿದರು.
ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಎಲ್ ಎಲ್ ಪಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸ್ವಚ್ಚ ಭಾರತ್ ಚಾರಿಟೇಬಲ್ ಟ್ರಸ್ಟ್ ಮತ್ತು ರಿಟಾಪ್ ಸೊಲ್ಯೂಷನ್ಸ್ ಇವರ ಸಾರಥ್ಯದಲ್ಲಿ ಪುತ್ತೂರು ನಗರ ಸಭೆಯ ಸಹಯೋಗದಲ್ಲಿ ಘಟಕವನ್ನು ನಿರ್ಮಿಸಲಾಗಿದೆ.
ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿತ್ಯಾಜ್ಯದಿಂದ ಉತ್ಪಾದನೆ ಗೊಳ್ಳಲಿರುವ ಕರ್ನಾಟಕ ರಾಜ್ಯದ ಪ್ರಥಮ ಸಿ ಎನ್ ಜಿ ಘಟಕವಾಗಿರುತ್ತದೆ. ಸುಮಾರು 8 ಟನ್ ಗಳಷ್ಟು ಹಸಿ ತ್ಯಾಜ್ಯವನ್ನು ಸಂಸ್ಕರಿಸಲಿರುವ ಈ ಘಟಕಕ್ಕೆ ಸುಮಾರು 3 ಕೋಟಿ ರೂ. ವೆಚ್ಚವಾಗಿರುತ್ತದೆ. ಪ್ರತಿ ದಿನ ಸರಾಸರಿ 250 ಕೆಜಿಯಷ್ಟು ಸಿ.ಎನ್.ಜಿ. ಉತ್ಪಾದನೆಗೊಳ್ಳಲಿದೆ.























