ಪುತ್ತೂರು: ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು, ಗೌರವಾಧ್ಯಕ್ಷರಾಗಿ ಬಾಲಚಂದ್ರ ದೇವಸ್ಯ, ಅಧ್ಯಕ್ಷರಾಗಿ ಸಂದೀಪ್ ಆರ್ಯಾಪು ಆಯ್ಕೆಯಾದರು.
ಬಾಲಚಂದ್ರ ದೇವಸ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ಭವಿತ್ ರೈ ಮಲಾರು, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ನಡುಮನೆ, ಜೊತೆ ಕಾರ್ಯದರ್ಶಿಯಾಗಿ ಗೌತಮ್ ನೀರ್ಕಜೆ, ಕೋಶಾಧಿಕಾರಿಯಾಗಿ ಲಿಖಿತ್ ಅಡ್ಕ, ಭಜನಾ ಉಸ್ತುವಾರಿಯಾಗಿ ಕಾರ್ತಿಕ್ ಆರ್ಯಾಪು, ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ಗೌಡ, ವಿನಯ ನಾಯ್ಕ, ಮನೋಜ್ ಕಾರ್ಪಾಡಿ, ಪೂವಪ್ಪ ಗೌಡ, ಹರೀಶ್ ಕಾರ್ಪಾಡಿ, ಶೋಕ್ ದೇವಸ್ಯ, ಸಂದೀಪ್ ಸಂಟ್ಯಾರು, ಕ್ರೀಡಾ ಕಾರ್ಯದರ್ಶಿಗಳಾಗಿ ವಿಕಾಸ್ ಎಮ್, ತನುಷ್ ಕಾರ್ಪಾಡಿ, ಗೌರವ ಸಲಹೆಗಾರರಾಗಿ ಸುಧಾಕರ್ ರಾವ್, ದೇವಯ್ಯ, ಕುಶಾಲಪ್ಪ ಗೌಡ ದೇವಸ್ಯ, ದುಗ್ಗಪ್ಪ ಗೌಡ, ತಿಮ್ಮಪ್ಪ ಪೂಜಾರಿ, ಶಾಂತಪ್ಪ ಪೂಜಾರಿ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾದ ರೋಹಿತ್, ಪೂವಪ್ಪ ಗೌಡ, ಅಶೋಕ್ ದೇವಸ್ಯ, ಸಂತಪ್ಪ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.






















