ಸ್ಥಳೀಯ

ನಾಳೆ (ಮಾ. 22) ವಿಟ್ಲ, ಪುತ್ತೂರಿಗೆ ಕ್ಯಾ. ಬ್ರಿಜೇಶ್ ಚೌಟ | ದ.ಕ. ಬಿಜೆಪಿ ಅಭ್ಯರ್ಥಿಯ ಕಾರ್ಯಕ್ರಮದ ವಿವರ ಇಲ್ಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಲೋಕಸಭಾ ಚುನಾವಣೆಯ ದ.ಕ. ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟಾ ಅವರು ಮಾ. 22ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ ಹಾಗೂ ಪುತ್ತೂರಿಗೆ ಭೇಟಿ ನೀಡಲಿದ್ದಾರೆ.

akshaya college

ಬೆಳಿಗ್ಗೆ 8.30ಕ್ಕೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಅರಮನೆಗೆ ಭೇಟಿ ನೀಡಿ ಬಳಿಕ ವಿವಿಧ ದೇವಸ್ಥಾನಗಳಿಗೆ ತೆರಳಲಿದ್ದಾರೆ.

10 ಗಂಟೆಗೆ ಕಂಬಳಬೆಟ್ಟು ಭಜನಾ ಮಂದಿರದ ಬಳಿ ನಡೆಯುವ ವಿಟ್ಲ – ಪುಣಚ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಲಿದ್ದಾರೆ.

11 ಗಂಟೆಗೆ ಪುತ್ತೂರು ಜೈನ ಭವನದಲ್ಲಿ ನಡೆಯುವ ಪುತ್ತೂರು ನಗರ ಮಂಡಲ ಹಾಗೂ ಬಲ್ನಾಡು, ಕೊಡಿಪ್ಪಾಡಿ, ಕಬಕ, ಬನ್ನೂರು ಪಂಚಾಯತ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ‌ 2.30ಕ್ಕೆ ಕಾವು ಜನಮಂಗಳ ಸಭಾಭವನದಲ್ಲಿ ನಡೆಯುವ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಲಿದ್ದಾರೆ. ಬಳಿಕ ಹನುಮಗಿರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಸಂಜೆ 5ಕ್ಕೆ ಪರ್ಪುಂಜ ಶಿವಕೃಪಾ ಅಡಿಟೋರಿಯಮ್ ನಲ್ಲಿ ನಡೆಯುವ ಪಾಣಾಜೆ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನುದ್ದೆಶಿಸಿ ಮಾತನಾಡಲಿದ್ದಾರೆ.

ಸಂಜೆ 6ಕ್ಕೆ ಉಪ್ಪಿನಂಗಡಿ C.A ಬ್ಯಾಂಕ್ ಸಭಾಭವನದಲ್ಲಿ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆ ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107