ಪುತ್ತೂರು : ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನಾಚರಣೆ ಶಿಂಟೂರು ಸ್ಮೃತಿ-
2025 ಕಾರ್ಯಕ್ರಮ ಅ.
14ರಂದು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಕರ್ನಲ್ ರಾಜೇಶ್ ಹೊಳ್ಳ ಎಂ.ಎಸ್ ಅವರಿಗೆ
ಶೀಂಟೂರು ಸನ್ಮಾನ’ ಪ್ರದಾನ ಮಾಡಲಾಗುವುದು ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರಿ ರತ್ನ' ಸವಣೂರು ಕೆ.ಸೀತಾರಾಮ ರೈ ಅವರು ತಿಳಿಸಿದ್ದಾರೆ. ಅವರು ಮಂಗಳವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ
14ನೇ ವರ್ಷದ ಸ್ಥಾಪಕರ ದಿನಾಚರಣೆ
ಶೀಂಟೂರು ಸ್ಮೃತಿ’ ಕಾರ್ಯಕ್ರಮವನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎ.ಆರ್ ಉದ್ಘಾಟಿಸಲಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾದ ವಕೀಲ ಅಶ್ವಿನ್ ಎಲ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಇತ್ತೀಚೆಗೆ ನಿವೃತ್ತಿಗೊಂಡಿರುವ ಬಂಟ್ವಾಳದ ಕರ್ನಲ್ ರಾಜೇಶ್ ಹೊಳ್ಳ ಎಸ್.ಎಂ ಅವರಿಗೆ ಶೀಂಟೂರು ಸನ್ಮಾನ ಪ್ರದಾನ ಮಾಡಲಾಗುವುದು. ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಸನ್ಮಾನ ಕಾರ್ಯ ನಡೆಸಲಿದ್ದಾರೆ. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮೆನೇಜರ್ ಸೂಂತೋಡು ಹೂವಯ್ಯ ಸುಳ್ಯ ಶೀಂಟೂರು ಸಂಸ್ಮರಣಾ ಉಪನ್ಯಾಸ ನೀಡಲಿದ್ದಾರೆ. ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿ ಎನ್.ಸುಂದರ ರೈ ನಡುಮನೆ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
10 ವಿದ್ಯಾರ್ಥಿಗಳಿಗೆ ಶೀಂಟೂರು ಶಿಷ್ಯವೇತನ ವಿತರಣೆ:
ಪ್ರತೀ ವರ್ಷ ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಯ ೧೦ ಮಂದಿ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ತಲಾ ರೂ.೫ ಸಾವಿರದಂತೆ ಶಿಷ್ಯವೇತನ ನೀಡಲಾಗುತ್ತಿದೆ. ಈ ವರ್ಷ ಧನ್ಯಶ್ರೀ ಬಿ.ಡಿ(ತೃತೀಯ ಬಿಕಾಂ), ದೀಕ್ಷಿತ್ ಜಿ(ತೃತೀಯ ಬಿಎ), ಪವನ್ ಹೆಚ್.ಎಸ್(ತೃತೀಯ ಬಿಸಿಎ), ಶ್ರೀರಕ್ಷ ಪಿ(ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗ), ಪ್ರತೀಕ್ಷ ಪಿ(ವಾಣಿಜ್ಯ ವಿಭಾಗ), ಶಝಾ ಫಾತಿಮ(10ನೇ ತರಗತಿ), ಎನ್.ಆರ್.ಇಫಾ(೮ನೇ ತರಗತಿ), ವಂದನ್ ರೈ ಸಿ(೭ನೇ ತರಗತಿ), ದಿವಿತ್(೫ನೇ ತರಗತಿ) ಮತ್ತು ಯುಕೆಜಿಯ ಅಝ ಫಾತಿಮ ಅವರಿಗೆ ಶೀಂಟೂರು ಶಿಷ್ಯವೇತನ ನೀಡಿ ಪುರಸ್ಕರಿಸಲಾಗುವುದು ಎಂದು ಮಾಹಿತಿ ನೀಡಿದರು. .
ಸುದ್ಧಿಗೋಷ್ಠಿಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾದ ವಕೀಲ ಅಶ್ವಿನ್ ಎಲ್ ಶೆಟ್ಟಿ, ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿಗಳಾದ ಎನ್.ಸುಂದರ ರೈ ನಡುಮನೆ, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್.ಆಳ್ವ ಉಪಸ್ಥಿತರಿದ್ದರು.
ಅ. 14: ವಿದ್ಯಾರಶ್ಮಿ ವಿದ್ಯಾಲಯದಲ್ಲಿ 14ನೇ ವರ್ಷದ ಸ್ಥಾಪಕರ ದಿನಾಚರಣೆ ಶೀಂಟೂರು ಸ್ಮೃತಿ’ | ನಿವೃತ್ತ ಸೈನಿಕ ಕರ್ನಲ್ ರಾಜೇಶ್ ಹೊಳ್ಳ ಎಂ.ಎಸ್ ಅವರಿಗೆಶೀಂಟೂರು ಸನ್ಮಾನ’ ಪ್ರದಾನ
What's your reaction?
Related Posts
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ
ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ…
ಸ್ಥಳಾಂತರ ಭಾಗ್ಯ ಕಳೆದುಕೊಂಡ ಪುತ್ತೂರು ಮಹಿಳಾ ಪೊಲೀಸ್ ಠಾಣೆ!!
ಬೆಂಗಳೂರು ಪುತ್ತೂರು: ಪುತ್ತೂರಿನಲ್ಲಿರುವ ಮಹಿಳಾ ಪೊಲೀಸ್ ಠಾಣೆಯನ್ನು ಪ್ರಸ್ತುತ ಸ್ಥಳದಿಂದ…
ಕಬಕ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ
ಕಬಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಶೌರ್ಯ ವಿಪತ್ತು…
ಮೆಸ್ಕಾಂನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ
ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ, ಪುತ್ತೂರು ನಗರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ…
ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಪುತ್ತೂರು: ಇಲ್ಲಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್'ನಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು…
ಶಿಲ್ಪಕ್ಕೆ ಜೀವ, ಶಿಲ್ಪಿಗೆ ಜೀವನ | ಶಿವಪೇಟೆಯಲ್ಲಿ ತಯಾರಾಗುತ್ತಿವೆ ಗಣಪನ ಮೂರ್ತಿ!
ಗಣೇಶ ಚತುರ್ಥಿಗೆ ಇನ್ನು ಕೆಲ ದಿನಗಳಷ್ಟೇ ಬಾಕಿ. ಅಂದು ಹಲವು ರೀತಿಯ ಗಣಪತಿ ಮೂರ್ತಿಗಳು…
ಪುತ್ತೂರು: ಪಿಲಿಗೊಬ್ಬು-ಸೀಸನ್ 3 ಹಾಗೂ ಫುಡ್ ಫೆಸ್ಟ್ನ ಆಮಂತ್ರಣ ಪತ್ರ ಬಿಡುಗಡೆ
ಪುತ್ತೂರು: ತುಳುನಾಡಿನ ಜಾನಪದ ಕಲೆ ಹುಲಿವೇಷವನ್ನು ಉಳಿಸಿ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ…
ಸಂಗೀತಗಾರ್ತಿ ಸವಿತಾ ಕೋಡಂದೂರು ಅವರಿಗೆ ಚಂದನ ಸ್ವರ ಸಂಗೀತ ಪ್ರಶಸ್ತಿ ಪ್ರಧಾನ
ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಅಪಾರ…
ಪುತ್ತೂರಿನ ಶೃಂಗದಲ್ಲಿ ಅರಳಿದ ತಿರಂಗಾ
ಪುತ್ತೂರು: ಮುತ್ತು ಬೆಳೆದ ಪುತ್ತೂರಿನ ಅತೀ ಎತ್ತರದ ಪ್ರದೇಶವಾದ ಬಿರುಮಲೆ ಬೆಟ್ಟದ ಶೃಂಗದಲ್ಲಿ…
ಆ. 10ರಂದು ಆಟಿಡೊಂಜಿ ದಿನ, ಸಾಧಕರ ಗುರುತಿಸುವ ಕಾರ್ಯಕ್ರಮ | ನಲಿಕೆಯವರ ಸಮಾಜ ಸೇವಾ ಸಂಘ, ವಲಯ ಸಮಿತಿ, ರಾಜ್ಯ ಪಾಣಾರ, ಅಜಲ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಆಯೋಜನೆ
ಪುತ್ತೂರು: ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ, ತಾಲೂಕು ವಲಯ ಸಮಿತಿಗಳು ಹಾಗೂ ಕರ್ನಾಟಕ ರಾಜ್ಯ…