Gl
ಸ್ಥಳೀಯ

ಮರಾಟಿ ಯುವ ಟ್ರೋಫಿ 2025ರ ಆಮಂತ್ರಣ ಪತ್ರ ಬಿಡುಗಡೆ

ಮರಾಟಿ ಯುವ ಟ್ರೋಫಿ 2025ರ ಆಮಂತ್ರಣ ಪತ್ರವನ್ನು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮರಾಟಿ ಯುವ ಟ್ರೋಫಿ 2025ರ ಆಮಂತ್ರಣ ಪತ್ರವನ್ನು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದಲ್ಲಿ ಬಿಡುಗಡೆಗೊಳಿಸಲಾಯಿತು.

Pashupathi

ಏಪ್ರಿಲ್ 27ರಂದು ನಡೆಯುವ ಕ್ರಿಕೆಟ್ ಪಂದ್ಯದ ಆಮಂತ್ರಣವನ್ನು ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಪೂವಪ್ಪ ನಾಯ್ಕ್ ಕುಂಞಕುಮೇರು, ಸಂಘದ ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ನಾಯ್ಕ್ ಎನ್.ಎಸ್. ಉಪ್ಪಳಿಗೆ, ಮಾಜಿ ಅಧ್ಯಕ್ಷರೂ ಯುವ ವೇದಿಕೆಯ ಉಸ್ತುವಾರಿಗಳಾದ ರಾಮಚಂದ್ರ ನಾಯ್ಕ್ ಕೇಪುಳು, ಅಶೋಕ್ ನಾಯ್ಕ್ ಬಲ್ನಾಡು ಬಿಡುಗಡೆ ಗೊಳಿಸಿದರು.

akshaya college

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪೂವಪ್ಪ ನಾಯ್ಕ್ ಕುಂಞಕುಮೇರು ಶುಭಹಾರೈಸಿದರು.

ಮರಾಟಿ ಟ್ರೋಫಿ -2025 ಕ್ರೀಡಾ ಸಮಿತಿಯ ಸಂಚಾಲಕ ಈಶ್ವರ ಮಿತ್ತಡ್ಕ, ಅಧ್ಯಕ್ಷ ರವೀಶ್ ತಾರಿಗುಡ್ಡೆ, ಉಪಾಧ್ಯಕ್ಷ ಅಶೋಕ್ ನಾಯ್ಕ್ ಸೊರಕೆ, ಮರಾಟಿ ಯುವ ವೇದಿಕೆಯ ಅಧ್ಯಕ್ಷ ವಸಂತ ಆರ್ಯಾಪು, ಉಪಾಧ್ಯಕ್ಷ ನವೀನ್ ಕುಮಾರ್ ಕೆ, ಮಾಜಿ ಅಧ್ಯಕ್ಷ ವೆಂಕಪ್ಪ ಬರೆಪ್ಪಾಡಿ, ಆಮಂತ್ರಣ ಪತ್ರಿಕೆಯನ್ನು ವಿನ್ಯಾಸ ಮಾಡಿದ ಯುವ ವೇದಿಕೆಯ ನಿಕಟಪೂರ್ವ ಕಾರ್ಯದರ್ಶಿಗಳೂ ಮೇಶಾ ಗ್ರಾಫಿಕ್ಸ್ ಪಾಣಾಜೆ ಇದರ ಮಾಲೀಕರು ಗಂಗಾಧರ ಪಾಣಾಜೆ, ಮರಾಟಿ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಮಠಂತಬೆಟ್ಟು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮುಕ್ವೆಯನ್ನು ಮುಳುಗಿಸಿದ ಮಳೆ ನೀರು | ಮನೆ, ಅಂಗಡಿಗಳನ್ನು ಮುಳುಗಿಸಿತು ಉಕ್ಕಿ ಹರಿದ ಚರಂಡಿ ನೀರು; ಹೆದ್ದಾರಿ ಬಂದ್!

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ…