pashupathi
ಧಾರ್ಮಿಕ

ಸಂನ್ಯಾಸತ್ವ ಸ್ವೀಕರಿಸಿದ ದಕ್ಷಿಣ ಭಾರತದ ನಟಿ!!

tv clinic
ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಜನಪ್ರಿಯರಾಗಿದ್ದ 90ರ ದಶಕದ ಬಾಲಿವುಡ್ ನ ಹಾಟ್ ನಟಿ ಜೀವನದ ಐಷಾರಾಮದ ವೈಭೋಗ ಬದುಕಿಗೆ ವಿದಾಯ ಹೇಳಿ ಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವಿಕರಿಸಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಜನಪ್ರಿಯರಾಗಿದ್ದ 90ರ ದಶಕದ ಬಾಲಿವುಡ್ ನ ಹಾಟ್ ನಟಿ ಜೀವನದ ಐಷಾರಾಮದ ವೈಭೋಗ ಬದುಕಿಗೆ ವಿದಾಯ ಹೇಳಿ ಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಕೈಗೊಂಡು ಆಧ್ಯಾತ್ಮ ಹಾದಿ ಹಿಡಿದಿದ್ದಾರೆ.

akshaya college

ಕುಂಭಮೇಳದ ಕಿನ್ನರ ಅಖಾಡದಲ್ಲವರು ಮಹಾಮಾಂಡಲೇಶ್ವರಿಯಾಗಿದ್ದಾರೆ.

ಕನ್ನಡ, ಮಲಯಾಳಂ ಸಹಿತ ದ.ಭಾರತೀಯ ಚಿತ್ರಗಳಲ್ಲೂ ನಟಿಸಿದ್ದ ಅವರು 90ರ ದಶಕದಲ್ಲಿ ಪಡ್ಡೆ ಹೈದರ ನಿದ್ದೆಗೆಡಿಸಿದ ಹಾಟ್ ನಟಿಯಾಗಿ ಜನಪ್ರಿಯರಾಗಿದ್ದರು. ಐಷಾರಾಮದ ಬದುಕಿಗೆ ವಿರಾಮವಿತ್ತು ದಿಢೀರನೆ ಸಾಧ್ವಿಯಾದ ಅವರು ಕಿನ್ನರ ಅಖಾಡಕ್ಕೆ ಮಹಾಮಂಡಲೇಶ್ವರಿಯಾಗಿ ನೇಮಕಗೊಂಡರು.

ಕಿನ್ನರ ಅಖಾಡ ಎಂದರೆ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ. 2015ರಲ್ಲಿ ಆರಂಭವಾದ ಈ ಅಖಾಡ ಅಂತರಾಷ್ಟ್ರೀಯ ಸಂತರ ಸಂಘಟನೆಯ ಆಧೀನದಲ್ಲಿದೆ. ಈ ಸಂಘಟನೆಗೆ ನಟಿ ಮಮತಾ ಕುಲಕರ್ಣಿ ಇನ್ನು ಮಹಾಮಂಡಲೇಶ್ವರಿಯಾಗಿದ್ದಾರೆ. ಇದೊಂದು ಧಾರ್ಮಿಕ ಮಹತ್ವದ ಜವಾಬ್ದಾರಿಯಾಗಿದು, ಜ.24ರಂದು ಮಮತಾ ಕುಲಕರ್ಣಿ ಅವರಿಂದ ಪಿಂಡಪ್ರಧಾಪ ಮಾಡಿಸಿ ಮಹಾಮಂಡಲೇಶ್ವರಿ ಪೀಠಾರೋಹಣ ನಡೆಯಲಿದೆ. ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮೆರೆದಿದ್ದ ಅವರು ದೇಶದ ಪ್ರಮುಖ ನಟರೊಂದಿಗೆ ನಟಿಸಿ ಜನಪ್ರಿಯರಾಗಿದ್ದರು. ಬದುಕಿನ ಯಾನದಲ್ಲಿ ಐಷಾರಾಮದ ಸುಖಭೋಗಕ್ಕೆ ವಿದಾಯವಿತ್ತು ಆಧ್ಯಾತ್ಮದತ್ತ ಮುಖ ಮಾಡಿದ ಅವರ ಆಯ್ಕೆ ಚರ್ಚಿತವಾಗುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…

91ನೇ ವರ್ಷದ ಪುತ್ತೂರು ಶಾರದೋತ್ಸವಕ್ಕೆ ಚಾಲನೆ | ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಶ್ರೀ ಶಾರದಾ ಮೂರ್ತಿ ಪ್ರತಿಷ್ಠೆ

ಪುತ್ತೂರು: ವರ್ಷಂಪ್ರತಿಯಂತೆ ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಶಾರದೋತ್ಸವಕ್ಕೆ ಸೋಮವಾರ…