Gl
ಧಾರ್ಮಿಕ

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ, ಅನ್ನಪೂರ್ಣೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

ದೇವಸ್ಥಾನದಲ್ಲಿ ಅನ್ನದಾನ, ಬ್ರಹ್ಮಕಲಶೋತ್ಸವ, ಭಜನೆ, ವೇದ, ಪಾರಾಯಣ ನಿಷ್ಠೆಯಿಂದ ಮಾಡಿದಾಗ ದೇವರ ಸಾನಿಧ್ಯ ವೃದ್ಧಿಯಾಗುತ್ತದೆ. ಭಗವಂತನ ಸಾನಿಧ್ಯ ವೃದ್ದಿಯಾದಾಗ ಭಗವಂತ ಭಕ್ತರನ್ನು ಸಲಹುತ್ತಾರೆ 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದೇವಸ್ಥಾನದಲ್ಲಿ ಅನ್ನದಾನ, ಬ್ರಹ್ಮಕಲಶೋತ್ಸವ, ಭಜನೆ, ವೇದ, ಪಾರಾಯಣ ನಿಷ್ಠೆಯಿಂದ ಮಾಡಿದಾಗ ದೇವರ ಸಾನಿಧ್ಯ ವೃದ್ಧಿಯಾಗುತ್ತದೆ. ಭಗವಂತನ ಸಾನಿಧ್ಯ ವೃದ್ದಿಯಾದಾಗ ಭಗವಂತ ಭಕ್ತರನ್ನು ಸಲಹುತ್ತಾರೆ ಎಂದು ಶೀರೂರು ಮಠದ ವೇದವರ್ದನ ತೀರ್ಥ ಸ್ವಾಮೀಜಿ ಹೇಳಿದರು.

Pashupathi

ಸಂಪ್ಯ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಪ್ರಥಮ ದಿನದ ಧಾರ್ಮಿಕ ಸಭೆಯಲ್ಲಿ ಅವರು ಅಶೀರ್ವಚನ ನೀಡಿದರು. 

akshaya college

ದೇವರು ನಮ್ಮ ಭಾವನೆ ಅರ್ಥ ಮಾಡಿಕೊಳ್ಳುವವರು. ದೇವರ ಸೇವೆಯನ್ನು ನಾವು ನಿಯಮ, ನಿಷ್ಠೆಯಿಂದ ಮಾಡಬೇಕು. ದೇವರ ಸೇವೆಯನ್ನು ಭಕ್ತಿ, ಶ್ರದ್ಧೆಯಿಂದ ಮಾಡಿದಾಗ ಭಗವಂತ ತೃಪ್ತಿಯಾಗಿ ಅನುಗ್ರಹಿಸುತ್ತಾರೆ. ನಮ್ಮ ಕರ್ತವ್ಯ ನಿಷ್ಠೆಯಿಂದ ಮಾಡಿದಾಗ ದೇವರ ಅನುಗ್ರಹಿಸುತ್ತಾರೆ ಎಂದು ಹೇಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಬ್ರಹ್ಮಕಲಶೋತ್ಸವದಲ್ಲಿ ಗ್ರಾಮದ ಜನರೆಲ್ಲರೂ ದೇವರ ಹೆಸರಿನಲ್ಲಿ ಒಟ್ಟು ಸೇರುವ ಕಾರ್ಯವಾಗುತ್ತದೆ. ಭಕ್ತಾದಿಗಳು ಒಟ್ಟು ಸೇರಿ ಸಾನಿಧ್ಯ ವೃದ್ದಿ ಮಾಡಲಾಗುತ್ತದೆ. ಬ್ರಹ್ಮಕಲಶೋತ್ಸವದ ನಿಮಿತ್ತದಲ್ಲಿ ಸಮಾಜದಲ್ಲಿ ಪರಿವರ್ತನೆ ಆಗುತ್ತಿದ್ದು ದೇವರಿಗೆ ಬ್ರಹ್ಮಕಲಶೋತ್ಸವ ಜೊತೆಗೆ ಗ್ರಾಮದ ಜನರಿಗೂ ನಡೆದಂತಾಗುತ್ತದೆ. ಜನರಿಗೆ ಉತ್ಸವ, ಸಂಭ್ರಮ ನೀಡುತ್ತದೆ. ಬ್ರಹ್ಮಕಲಶೋತ್ಸವದಲ್ಲಿ ಪೂಜೆ, ಪುನಸ್ಕಾರಗಳ ಜೊತೆಗೆ ಅಲ‌ಂಕಾರಗಳು ಭಗವಂತನ ಸಂತೃಪ್ತಗೊಳಿಸುತ್ತದೆ ಎಂದರು.

ಚಲನಚಿತ್ರ ನಟ, ನಿರ್ದೇಶಕ ರಾಹುಲ್ ಅಮೀನ್ ಮಾತನಾಡಿ, ಕಲೆಯೇ ನನ್ನ ದೇವರು. ದೇವರಾಗಿ ನಂಬಿದವನು. ಕಲಾ ಕ್ಷೇತ್ರದಲ್ಲಿ ಮುನ್ನಡೆಯುವುದೇ ತನ್ನ ಹಂಬಲವಾಗಿದ್ದು, ಕಲೆಯಲ್ಲಿ ನಿಷ್ಠೆಯಿಂದ ಮುನ್ನಡೆಸಿಕೊಂಡು ಬಂದಿದ್ದೇನೆ. ತುಳು ಸಿನಿಮಾಗಳನ್ನು ಮಾಡುತ್ತಿದ್ದು ತುಳು ಸಿನಿಮಾವನ್ನು ಉಳಿಸಿ ಬೆಳೆಸಬೇಕು ಎಂದು ವಿನಂತಿಸಿದರು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸಾಹಸ ಮಾದರಿಯಲ್ಲಿ ಪ್ರೀತಂ ಪುತ್ತೂರಾಯರವರು ಒಬ್ಬಂಟಿಯಾಗಿ ಕ್ಷೇತ್ರವನ್ನು ಬೆಳಗಿಸಿದವರು. ಕ್ಷೇತ್ರದಲ್ಲಿ

ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕಲೆಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ಯಾವುದೇ ಪ್ರಚಾರವಿಲ್ಲದೆ ದೇವರ ಸೇವೆ ನಡೆಸುತ್ತಿದ್ದಾರೆ. ಕ್ಷೇತ್ರದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ವಿನಂತಿಸಿದರು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಸಂದರ್ಭೋಚಿತವಾಗಿ ಮಾತನಾಡಿದರು. ಚಲನಚಿತ್ರ ನಟ ದರ್ಶನ್, ಉದ್ಯಮಿ ಭೀಮಯ್ಯ ಭಟ್, ಹಿರಿಯರಾದ ಮಂಜಪ್ಪ ರೈ ಬಾರಿಕೆ ಉಪಸ್ಥಿತರಿದ್ದರು.

ಸನ್ಮಾನ:

ಚಲನಚಿತ್ರ ನಟ, ನಿರ್ದೇಶಕ ರಾಹುಲ್ ಅಮೀನ್, ಭಾವನ ಕಲಾ ಆರ್ಟ್ಸ್ ನ ವಿಘ್ನೇಶ್ ವಿಶ್ವಕರ್ಮ ಅವರನ್ನು ಸನ್ಮಾನಿಸಲಾಯಿತು.

ಪೂರ್ಣಿಮಾ ಪುತ್ತೂರಾಯ ಪ್ರಾರ್ಥಿಸಿದರು. ಕ್ಷೇತ್ರದ ತಂತ್ರಿ ಪ್ರೀತಂ ಪುತ್ತೂರಾಯ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಲೋಕೇಶ್ ಹೆಗ್ಡೆ ದಂಪತಿ ಸ್ವಾಮಿಜಿಗೆ ಫಲ ಪುಷ್ಪ ನೀಡಿ ಗೌರವಿಸಿದರು. ಕೇಶವ ಕುಕ್ಕಾಡಿ, ರಾಘವ ಉದಯಗಿರಿ, ಲತಾ ಕುಲಾಲ್, ಚೆನ್ನಪ್ಪ ಬಾರಿಕೆ, ಶ್ರೀನಿವಾಸ ಉದಯಗಿರಿ, 

ಗುರುಪ್ರಸಾದ್ ಹೆಬ್ಬಾರ್, ಸದಾಶಿವ ಬೋರ್ಕರ್ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರು ಶ್ರೀ ದೇವಿ ನೃತ್ಯ ಕೇಂದ್ರದ ನಿರ್ದೇಶಕಿ ಆರತಿ ಶೆಟ್ಟಿ ನಿರ್ದೇಶನದಲ್ಲಿ ಭರತನಾಟ್ಯ ನಡೆಯಿತು. 

ಕಾರ್ಯಾಲಯ ಉದ್ಘಾಟನೆ;

ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಬ್ರಹ್ಮಕಲಶೋತ್ಸವದ ಕಾರ್ಯಾಲಯವನ್ನು ಹಿರಿಯರಾದ ಮಂಜಪ್ಪ ರೈ ಬಾರಿಕೆ ದೀಪ ಬೆಳಗಿಸಿ ಉದ್ಘಾಟಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts