ಬಂಟ್ವಾಳ: ಅಲ್ಲಿಪಾದೆ ಸಂತ ಅಂಥೋನಿಯವರ ಚರ್ಚ್’ನಲ್ಲಿ ಸಾಂತ್’ಮಾರಿ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.



ಮೊಡಂಕಾಪು ಬಾಲಯೇಸುವಿನ ಚರ್ಚ್ ಧರ್ಮಗುರು ವಿಕ್ಟರ್ ಡಿಸೋಜಾ ಅವರು ದಿವ್ಯ ಬಲಿಪೂಜೆ ನೆರವೇರಿಸಿದರು.
ಬಂಟ್ವಾಳ ವಲಯದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು. ದಾನಿಗಳಿಗೆ ಕ್ಯಾಂಡಲ್ ನೀಡಿ ಗೌರವಿಸಲಾಯಿತು. ವಂ. ರಾಬರ್ಟ್ ಡಿಸೋಜಾ ಅವರು ಹಬ್ಬದಲ್ಲಿ ಪಾಲ್ಗೊಂಡವರಿಗೆ ಕೃತಜ್ಞತೆ ಸಲ್ಲಿಸಿದರು.























