ಕಾಣಿಯೂರು: ಮಹಾತ್ಮಾ ಗಾಂಧಿಜೀ ಉದ್ಯೋಗ ಖಾತರಿ ಯೋಜನೆ ರದ್ದು ಪಡಿಸಿ, ನೂತನ ಹೆಸರು ನೀಡಿರುವುದನ್ನು ಕಡಬ ಬ್ಲಾಕ್ ಕಾಂಗ್ರೆಸ್ ವಿರೋಧಿಸಿ, ತನ್ನ ಪ್ರತಿಭಟನೆ ಸೂಚಿಸಿದೆ.
ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಿ, ಪಿಡಿಓ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ನೀಡಲಾಗುತ್ತಿದೆ.
ಕಡಬ ಬ್ಲಾಕ್ ಕಾಂಗ್ರೆಸ್ ಪ್ರಮುಖರು ಕಾಣಿಯೂರು ಗ್ರಾಪಂನಲ್ಲಿ ಪ್ರತಿಭಟನೆ ನಡೆಸಿ, ಪಿಡಿಓ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ನೀಡಿದರು.





















