Gl
ದೇಶ

ತಿರುಪತಿಯಲ್ಲಿ ಚಿನ್ನದ ನಾಣ್ಯ ಖರೀದಿಗೆ ಎಟಿಎಂ!!

ತಿರುಪತಿಯಲ್ಲಿ ಚಿನ್ನದ ಎಟಿಎಂ, ನೋಟುಗಳ ಬದಲಾಗಿ ಚಿನ್ನದ ನಾಣ್ಯ ಬರುತ್ತೆ ತಿರುಪತಿಯಲ್ಲಿ 'ಗೋಲ್ಡ್ ಎಟಿಎಂ' ಪ್ರಾರಂಭವಾಗಿದೆ. ಚಿನ್ನದ ನಾಣ್ಯಗಳನ್ನು ಪಡೆಯಲು ಬಯಸುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ತಿರುಪತಿಯಲ್ಲಿ ಚಿನ್ನದ ಎಟಿಎಂ, ನೋಟುಗಳ ಬದಲಾಗಿ ಚಿನ್ನದ ನಾಣ್ಯ ಬರುತ್ತೆ ತಿರುಪತಿಯಲ್ಲಿ ‘ಗೋಲ್ಡ್ ಎಟಿಎಂ’ ಪ್ರಾರಂಭವಾಗಿದೆ. ಚಿನ್ನದ ನಾಣ್ಯಗಳನ್ನು ಪಡೆಯಲು ಬಯಸುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

Pashupathi

ಅಂತರರಾಷ್ಟ್ರೀಯ ದೇವಾಲಯಗಳ ಸಮಾವೇಶ ಮತ್ತು ಎಕ್ಸ್‌ಪೋ ತಿರುಪತಿಯಲ್ಲಿ ನಡೆಯುತ್ತಿದೆ, ಇದು ಭಗವಾನ್ ವೆಂಕಟೇಶ್ವರರಿಗೆ ಹೆಸರುವಾಸಿಯಾದ ಆಧ್ಯಾತ್ಮಿಕ ಕೇಂದ್ರವಾಗಿದೆ. ದೇವಾಲಯದ ಆಡಳಿತ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸುವ ಈ ಕಾರ್ಯಕ್ರಮ ಫೆಬ್ರವರಿ 19 ರವರೆಗೆ ಮುಂದುವರಿಯುತ್ತದೆ.

akshaya college

ಈ ಗೋಲ್ಡ್ ಎಟಿಎಂ ಎಂದರೇನು?

ತಿರುಪತಿಯಲ್ಲಿ ಗೋಲ್ಡ್ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ, ನಗದು ಹಿಂಪಡೆಯುವಂತೆಯೇ ನೇರ ಚಿನ್ನ ಖರೀದಿಗಳನ್ನು ಸಕ್ರಿಯಗೊಳಿಸುತ್ತದೆ. ಗೋಲ್ಡ್ ಎಟಿಎಂಗಳು ಇತರೆ ಎಟಿಎಂಗಳಂತೆಯೇ ಇರುವ ಮಷಿನ್ ಬಳಕೆದಾರರು ತಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಗೋಲ್ಡ್ ಎಟಿಎಂನಲ್ಲಿ ಚಿನ್ನ ಖರೀದಿ ಮಾಡಬಹುದು. ಎಟಿಎಂನ ಪರದೆಯ ಮೇಲೆ ಆ ದಿನದ ಚಿನ್ನದ ದರ ಗೋಚರಿಸುತ್ತಿರುತ್ತದೆ. ಬಳಕೆದಾರರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡನ್ನು ನಿಗದಿತ ಪ್ರದೇಶದಲ್ಲಿ ಇನ್‌ಸರ್ಟ್ ಮಾಡಬೇಕು. ಬಳಿಕ ಕ್ಲಿಕ್ ಹಿಯರ್ ಟು ಬೈ ಗೋಲ್ಡ್ ಎಂಬ ಬರೆಹ ಇರುವ ಜಾಗವನ್ನು ಕ್ಲಿಕ್ ಮಾಡಬೇಕು. ಬಳಿಕ PIN ನಮೂದಿಸಬೇಕು. ಅದಾದ ಬಳಿಕ ಎಷ್ಟು ಚಿನ್ನದ ನಾಣ್ಯ ಬೇಕೋ ಅಷ್ಟಕ್ಕೆ ಇರುವ ಮೊತ್ತವನ್ನು ಪಾವತಿಸಬೇಕು. ಇಷ್ಟಾಗುತ್ತಲೇ, ಚಿನ್ನದ ನಾಣ್ಯದ ಪ್ಯಾಕ್ ಎಟಿಎಂನಲ್ಲಿ ಹೊರಬರುತ್ತದೆ.

ಪ್ರಸ್ತುತ ಭಗವಾನ್ ವೆಂಕಟೇಶ್ವರ ಮತ್ತು ಗೋವಿಂದರಾಜ ಸ್ವಾಮಿ ರೂಪದಲ್ಲಿ ಲಭ್ಯವಿದೆ.ಇತ್ತೀಚೆಗೆ ಹೈದರಾಬಾದ್‌ನ ಬೇಗಂಪೇಟ್‌ನಲ್ಲಿ ಗೋಲ್ಡ್ ಎಟಿಎಂ ಪ್ರಾರಂಭಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕೊನೆಕ್ಷಣದಲ್ಲಿ ಏರ್ ಇಂಡಿಯಾ ಹಾರಾಟ ರದ್ದು: ಮಂಗಳವಾರ ಒಂದೇ ದಿನ 7 ಪ್ರಕರಣ!! ಏರ್ ಇಂಡಿಯಾ ವಿಮಾನದಲ್ಲಿ ಹೆಚ್ಚುತ್ತಿದೆಯೇ ತಾಂತ್ರಿಕ ದೋಷ?

ಕೊನೆ ಕ್ಷಣದಲ್ಲಿ ವಿಮಾನ ಹಾರಾಟ ರದ್ದು ಆಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಮಂಗಳವಾರ ಒಂದೇ…

 ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ| ರೂಪಾಯಿಗೆ ಬಲ ನೀಡಿದ ಕ್ರಮವನ್ನು‌ ಬಹಿರಂಗಪಡಿಸಿದ ವಿನಿಮಿಯ ದತ್ತಾಂಶ!

ಅಮೆರಿಕದ ಡಾಲರ್ ಎದುರು ಸೋಮವಾರ ಭಾರತೀಯ ರೂಪಾಯಿ ಬಲಗೊಂಡಿದ್ದು, ಜಾಗತಿಕವಾಗಿ ಅಮೆರಿಕದ ಕರೆನ್ಸಿ…

‘ಆಪರೇಷನ್ ಸಿಂಧೂರ್’ ನಂತರ ಚೀನಾಕ್ಕೆ ಅಜಿತ್ ದೋವಲ್ ಕಟು ಸಂದೇಶ! ಪಾಕ್ ಇಷ್ಟಕ್ಕೆ ಸುಮ್ಮನಾಗದಿದ್ದರೇ… ಮುಂದಿದೆ ಮಾರಿಹಬ್ಬ!

ಆಪರೇಷನ್ ಸಿಂಧೂರ್' ಮೂಲಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ ನಂತರ, ಭಾರತ…