Gl
ಕರಾವಳಿ

ಮಂಗಳೂರು ಕಮೀಷನರ್, ಎಸ್ಪಿ ಅವರಿಂದ ಶ್ಲಾಘನೀಯ ಕೆಲಸ!  ಶಾಂತಿ ಸ್ಥಾಪನೆಗೆ ಗಡಿಪಾರು ಉತ್ತಮ ಕಾರ್ಯ: ಕಾಂಗ್ರೆಸ್

ಪುತ್ತೂರು: ಕೋಮು ಭಾವನೆ ಕೆರಳಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು ಮಂಗಳೂರು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಎಸ್ಪಿ ಅರುಣ್ ಕುಮಾರ್ ಅವರು ಶ್ಲಾಘನೀಯ ಕೆಲಸ ಎಂದು ಪುಡಾ ಅಧ್ಯಕ್ಷ, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕೋಮು ಭಾವನೆ ಕೆರಳಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಎಸ್ಪಿ ಅರುಣ್ ಕುಮಾರ್ ಅವರು ಶ್ಲಾಘನೀಯ ಕೆಲಸ ಎಂದು ಪುಡಾ ಅಧ್ಯಕ್ಷ, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.

Pashupathi

ಕೋಮು ಸಾಮರಸ್ಯ ಹುಟ್ಟುಹಾಕಲು ಗಡಿಪಾರು ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಲ್ಲಿ ಹಕೀಂ, ಅಜಿತ್ ರೈ ಹೊನೆ, ಮನೀಷ್, ಅರುಣ್ ಕುಮಾರ್‌ ಪುತ್ತಿಲ ಮೊದಲಾದವರ ಹೆಸರು ಇದೆ. ಇವರುಗಳನ್ನು ಗಡಿಪಾರು ಮಾಡಿ, ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು‌ ನಡೆಸಿದ ಪ್ರಯತ್ನ ಪ್ರಸಂಶನೀಯ ಎಂದರು.

akshaya college

ದ.ಕ. ಜಿಲ್ಲೆಯ ಜನ ಶಾಂತಿ ಪ್ರೀಯರು ಅನ್ನುವುದರಲ್ಲಿ ಯಾರಿಗೂ ಸಂಶಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಕೋಮು ಆಧಾರಿತ ಹಿಂಸೆಗಳು ಆದಾಗ, ಕೋಮು ದಳ್ಳುರಿ, ಕೋಮು ಗಲಭೆಗಳು ಆದಾಗ, ಕೋಮು ಕೊಲೆಗಳು ಆದಾಗ ಸಂತೋಷ ಪಡುವ ಸಾಮಾನ್ಯ ನಾಗರಿಕರು ಯಾರೂ ಇಲ್ಲ. ಜನ ಬಯಸದೇ ಹೋದರೂ ಈ ಜಿಲ್ಲೆಯಲ್ಲಿ ಮತ್ತೆ ಮತ್ತೆ ಕೋಮು ಗಲಭೆಗಳು, ಧರ್ಮದ ಆಧಾರದಲ್ಲಿ ಅಮಾಯಕರ ಹತ್ಯೆಗಳು ನಡೆಯುತ್ತಲೇ ಇದೆ ಅನ್ನುವುದು ಅತ್ಯಂತ ಆಶ್ಚರ್ಯದ ವಿಷಯ. ಆಶ್ಚರ್ಯದಲ್ಲಿ ಆಶ್ಚರ್ಯವೆಂದರೆ ದ.ಕ. ಜಿಲ್ಲೆಯ ಶೇಕಡಾ 90ಕ್ಕಿಂತ ಹೆಚ್ಚು ಜನ ಬಯಸದ ಕೋಮುಗಲಭೆಗಳನ್ನು ಪ್ರಚೋದಿಸಿ ಅಮಾಯಕ ಜನರಿಂದ ಕೊಲೆ ಮಾಡಿಸುವವರು ಮತ್ತು ಅಮಾಯಕರ ಸಾವಿಗೆ ಕಾರಣರಾಗುವ ನಿಜವಾದ ಖಳನಾಯಕರು ತಮ್ಮ ತಮ್ಮ ಕೋಮುಗಳ ನಾಯಕರೆನಿಸಿಕೊಳ್ಳುವುದು. ಇದು ವಿಚಿತ್ರವಾದರೂ ಸತ್ಯ.

ಒಂದು ದ್ವೇಷ ಭಾಷಣ. ಅದರ ಪರಿಣಾಮವಾಗಿ ಒಂದು ಕೊಲೆ. ಅದಕ್ಕೆ ಪ್ರತೀಕಾರವಾಗಿ ಇನ್ನೊಂದು ಕೊಲೆ. ಹೀಗೆ ಕೊಲೆಗಳ ಸರಣಿ ಮುಂದುವರಿಯುತ್ತದೆ. ಒಂದು ಕೊಲೆಗೆ ಪ್ರತೀಕಾರವಾಗಿ ಇನ್ನೊಂದು ಕೊಲೆ ನಡೆಯುತ್ತದೆಯೆಂದಾದರೆ ಎರಡನೆಯದಾಗಿ ಕೊಲೆಯಾದವನ ಕೊಲೆಗೆ ಮೊದಲನೆಯವನನ್ನು ಕೊಂದವರೇ ಕಾರಣಕರ್ತರಾಗಿರುತ್ತಾರೆ.
ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಮಸೂದ್ ಎಂಬ ಯುವಕನನ್ನು ನಿಜವಾಗಿ ಕೊಂದವರು ಯಾರೆಂದರೆ ಅದು ದ್ವೇಷ ಭಾಷಣಗಳ ಮೂಲಕ ಆ ಯುವಕರ ತಲೆಗೆ ದ್ವೇಷ ತುಂಬಿದ ದ್ವೇಷ ಭಾಷಣಕಾರರೇ ಆಗಿದ್ದಾರೆ. ದೇಶದಾದ್ಯಂತ ಸಂಚಲನ ಉಂಟುಮಾಡಿದ ಪ್ರವೀಣ್ ನೆಟ್ಟಾರ್‌ರವರ ಹತ್ಯೆಯ ಹಿಂದಿರುವ ನಿಜವಾದ ಕೊಲೆಗಾರರು ಯಾರು? ನೇರವಾಗಿ ಕೊಂದವರು ಯಾರೇ ಆಗಿದ್ದರೂ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಮಸೂದ್ ಎಂಬ ಯುವಕನನ್ನು ಕೊಂದವರೇ ಪ್ರವೀಣ್ ನೆಟ್ಟಾರುರವರ ನಿಜವಾದ ಕೊಲೆಗಾರರು. ಸುರತ್ಕಲ್‌ನ ಫಾಝಿ ಲ್ ಎಂಬ ಅಮಾಯಕ ಯುವಕನನ್ನು ನಿಜವಾಗಿಯೂ ನಡುಬೀದಿಯಲ್ಲಿ ಕೊಲೆ ಮಾಡಿದವರು ಸುಹಾಸ್ ಶೆಟ್ಟಿ ಎಂಬ ರೌಡಿ ಶೀಟರ್ ಅಲ್ಲ , ಯಾರು ಪ್ರವೀಣ್ ನೆಟ್ಟಾರು ಅವರನ್ನು ಕೊಂದರೋ ಅವರೇ ಫಾಝಿಲ್‌ನ ಕೊಲೆಗಾರರು. ಅದೇ ರೀತಿ ಸುಹಾಸ್ ಶೆಟ್ಟಿಯನ್ನು ನಿಜವಾಗಿಯೂ ಕೊಂದವರು ಯಾರೆಂದರೆ ಫಾಝಿಲ್‌ನನ್ನು ಕೊಂದ ಕೊಲೆಗಾರರು‌. ಇತ್ತೀಚೆಗೆ ಬಂಟ್ವಾಳದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್‌ರವರನ್ನು ಕೊಂದವರು ಕೂಡಾ ಸುಹಾಸ್ ಶೆಟ್ಟಿಯನ್ನು ಕೊಂದವರೇ ಆಗಿದ್ದಾರೆ. ಅನ್ಯ ಧರ್ಮದ ಅಮಾಯಕನನ್ನು ಧರ್ಮದ ಹೆಸರಿನಲ್ಲಿ ಕೊಲ್ಲುವ ಮೂಲಕ ಇವರು ತಮ್ಮದೇ ಧರ್ಮದ ಇನ್ನೊಬ್ಬ ಅಮಾಯಕನ ಕೊಲೆಗೆ ಕಾರಣೀಕರ್ತರಾಗುತ್ತಾರೆ. ಆದರೆ ಈ ಎಲ್ಲಾ ಕೋಮು ಆಧಾರಿತ ಹತ್ಯೆಗಳ ಹಿಂದಿರುವ ಮೂಲ ಧಾತು ಯಾವುದೆಂದರೆ ಅದು ದ್ವೇಷ ಭಾಷಣ. ಈ ದ್ವೇಷ ಭಾಷಣಗಾರರೇ ಈ ಎಲ್ಲಾ ಕೊಲೆಗಳ ಹಿಂದಿರುವ ನೈಜ ಅಪರಾಧಿಗಳು, ಸಮಾಜ ದ್ರೋಹಿಗಳು. ಈ ಕೊಲೆಗಳ ಸರಣಿಯನ್ನು ಆರಂಭಿಸುವುದು ಸುಲಭ , ಒಂದು ದ್ವೇಷ ಭಾಷಣ ಮಾಡಿ, ಕಡಿಯಿರಿ, ಕೊಲ್ಲಿ ಎಂದು ಕರೆ ! ಇದಕ್ಕೆ ಕೊನೆ ಎಂದು ? ಕೊಲ್ಲುವುದಕ್ಕೆ ಕಾರಣ ಬೇಡ, ವೈಯ್ಯಕ್ತಿಕ ದ್ವೇಷ ಬೇಡ , ಹಣಕಾಸಿನ ಜಗಳ ಬೇಡ ! ಕೇವಲ ಅನ್ಯ ಧರ್ಮೀಯನಾದರೆ ಸಾಕು ಎನ್ನುವುದಾದರೆ ಇಲ್ಲಿ ಜನ ನೆಮ್ಮದಿಯಿಂದ ಬದುಕುವುದು ಹೇಗೆ ? ಮನೆಯಿಂದ ಹೊರಗೆ ಮನೆಯ ಮಗ ಮತ್ತೆ ಮನೆಗೆ ಹಿಂತಿರುಗಿ ಬರುತ್ತಾನೆ ಎಂಬ ನಿರೀಕ್ಷೆ ಇಲ್ಲದೇ ಹದಿಹರೆಯದವರ ತಂದೆ ತಾಯಿ ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ದ್ವೇಷ ಭಾಷಣ ವಿರೋಧಿಸಿದ ಸುಪ್ರೀಂ ಕೋರ್ಟ್:
ಅಕ್ಟೋಬರ್ 21, 2022ರಂದು ಪತ್ರಕರ್ತೆ ಶಾಹೀನ್ ಅಬ್ದುಲ್ಲಾ ಎಂಬವರು ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ಔಪಚಾರಿಕ ದೂರುಗಳಿಗಾಗಿ ಕಾಯದೆ ದ್ವೇಷ ಭಾಷಣ ಅಪರಾಧಗಳ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ. ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠವು, ಅಪರಾಧಿಯ ಧರ್ಮವನ್ನು ಲೆಕ್ಕಿಸದೆ ಅಂತಹ ಕ್ರಮ ಕೈಗೊಳ್ಳಬೇಕು ಎಂದು ಒತ್ತಿಹೇಳಿತು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ, 153 ಬಿ, 295 ಎ ಮತ್ತು 505 ನಂತಹ ನಿಬಂಧನೆಗಳನ್ನು ಉಲ್ಲೇಖಿಸಿ. ಕ್ರಮ ಕೈಗೊಳ್ಳಲು ಯಾವುದೇ ಹಿಂಜರಿಕೆಯನ್ನು ನ್ಯಾಯಾಲಯದ ತಿರಸ್ಕಾರವೆಂದು ಪರಿಗಣಿಸಲಾಗುತ್ತದೆ ಎಂದು ಕೂಡಾ ನ್ಯಾಯಾಲಯ ಎಚ್ಚರಿಸಿದೆ. ಏಪ್ರಿಲ್ 28, 2023 ಆದೇಶ: ಸುಪ್ರೀಂ ಕೋರ್ಟ್ ತನ್ನ ಅಕ್ಟೋಬರ್ 2022 ರ ಆದೇಶವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿದೆ. ದ್ವೇಷ ಭಾಷಣದ ಬಗ್ಗೆ ಸುಪ್ರೀಂ ಕೋರ್ಟ್ ಈ ರೀತಿಯ ಆದೇಶ ನೀಡಿದ್ದರೂ ಈ ದ್ವೇಷ ಭಾಷಣಕಾರರಿಗೆ ಇನ್ನೂ ಬುದ್ದಿ ಬಂದಿಲ್ಲ.

ಜಿಲ್ಲೆಯ ಅಭಿವೃದ್ಧಿಗೆ ಕಂಟಕ:

ಒಂದು ಕಾಲದಲ್ಲಿ ಬುದ್ದಿವಂತರ ನಾಡೆಂದು ಕರೆಸಿಕೊಳ್ಳುತ್ತಿದ್ದ ನಮ್ಮ ದ.ಕ.ಜಿಲ್ಲೆ ಇಂದು ಕೋಮುವಾದಿಗಳ ಜಿಲ್ಲೆ ಎಂಬ ಅಪಖ್ಯಾತಿಗೆ ತುತ್ತಾಗಿದ್ದರೆ ಅದಕ್ಕೆ ಕಾರಣ ಈ ದ್ವೇಷ ಭಾಷಣಕಾರರು. ದ.ಕ. ಜಿಲ್ಲೆಯಲ್ಲಿ ಯಾವುದೇ ಇಂದಿನ ದಿನಗಳಲ್ಲಿ ಹೊಸ ಹೊಸ ಕಾರ್ಖಾನೆಗಳು , ಉದ್ಯೋಗಾವಕಾಶಗಳು ತೆರೆಯದಿರುವುದಕ್ಕೂ ಇದೇ ಕಾರಣವಾಗಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನ ಸಂದಣಿ , ಟ್ರ್ಯಾಫಿಕ್ ಸಮಸ್ಯೆ , ಬೆಲೆ ಏರಿಕೆಯಿಂದ ಕಂಗೆಟ್ಟ ಸಾಫ್ಟ್‌ವೇರ್ ಸಂಸ್ಥೆಗಳು ಈಗಾಗಲೇ ಮಂಗಳೂರಿನಲ್ಲಿ ತಮ್ಮ ಕಂಪೆನಿಗಳನ್ನು ತೆರೆಯುವ ಬಗ್ಗೆ ಯೋಚಿಸಿದ್ದವು. ಸುಮಾರು 5000ದಷ್ಟು ಉದ್ಯೋಗಾವಕಾಶ ನೀಡಬಲ್ಲ ಈ ಕಂಪೆನಿಗಳು ವಿವಿಧ ಕಟ್ಟಡಗಳಲ್ಲಿ ಸ್ಥಳಾವಕಾಶಕ್ಕಾಗಿ ಈಗಾಗಲೇ LOI (Letter of intent) ಸಲ್ಲಿಸಿದ್ದು ಇದೀಗ ಕೋಮು ಆಧಾರಿತ ಕೊಲೆಗಳ ಕಾರಣದಿಂದ ತಮ್ಮ ನಿರ್ಧಾರದಿಂದ ಹಿಂದೆ ಸರಿದಿವೆ. ಕೋಮುದ್ವೇಷ ಇಡೀ ದ‌.ಕ.ಜಿಲ್ಲೆಯ ಅಭಿವೃದ್ಧಿ, ಉದ್ಯೋಗಾವಕಾಶ, ಸಮಾಜದ ಶಾಂತಿ , ನೆಮ್ಮದಿಗಳನ್ನು ನಾಶ ಮಾಡಿದ್ದು ಇನ್ನಾದರೂ ಇಲ್ಲಿ ಒಂದು ಶಾಂತ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಪೆಟ್ಟೊಂದು, ತುಂಡೆರಡು:

ದ್ವೇಷ ಭಾಷಣದ ಪರಿಣಾಮವೆಂದರೆ ಅದು, ಸತ್ತವನು ಸ್ಮಶಾನಕ್ಕೆ, ಕೊಂದವನು ಜೈಲಿಗೆ, ಎರಡೂ ಕಡೆಯ ಮಕ್ಕಳ ಹೆತ್ತವರು ಜೀವಂತ ನರಕಕ್ಕೆ ! ಅಭಿವೃದ್ಧಿ, ಉದ್ಯೋಗಾವಕಾಶಗಳು ಪಾತಾಳಕ್ಕೆ ! ಜಿಲ್ಲೆಯ ಗೌರವ ನೆಲಕ್ಕೆ ! ಕೇವಲ ತಾವು ನಾಯಕರಾಗಬೇಕು , ನಾಯಕರಾಗಿ, ಶಾಸಕರಾಗಿ ಮೆರೆಯಬೇಕೆಂಬ ಒಂದೇ ಉದ್ದೇಶದಿಂದ ಹತ್ತಾರು ಕುಟುಂಬಗಳನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುವ ದ್ವೇಷ ಭಾಷಣಕಾರರನ್ನ್ರು ಹತ್ತಿಕ್ಕಿ ಇಲ್ಲಿ ಶಾಂತಿ ನೆಲೆಸಲೇಬೇಕು ಎಂಬ ಸಂಕಲ್ಪದಿಂದ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ anti communal forceಅನ್ನು ಅಸ್ತಿತ್ವಕ್ಕೆ ತಂದು ಜಿಲ್ಲೆಯಲ್ಲಿ ಮತೀಯವಾದಿಗಳ ಬೆನ್ನು ಮೂಳೆ ಮುರಿಯುವ ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಸಮಯೋಚಿತವೂ, ನಿರ್ಣಾಯಕವೂ ಆಗಿದೆ. ಹೊಸದಾಗಿ ಅಧಿಕಾರ ವಹಿಸಿಕೊಮನಡ ಜಿಲ್ಲಾ ಪೊಲೀಸ್ ಕಮಿಷನರ್ ಸುಧೀರ್‌ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಎಸ್. ಪಿ. ಡಾ.ಅರುಣ್‌ರವರುಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಈ ಇಬ್ಬರೂ ಅಧಿಕಾರಿಗಳು ಧರ್ಮಾತೀತವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ದ.ಕ.ಜಿಲ್ಲೆಯ ಸುಮಾರು 36 ಜನರನ್ನು ಗುರುತಿಸಿ ಜಿಲ್ಲೆಯಿಂದ ಅವರ ಗಡೀಪಾರಿಗೆ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ. ಪುತ್ತೂರು ನಗರ ಠಾಣಾ ವ್ಯಾಪ್ತಿಯ ಅಬ್ದುಲ್ ರಹಿಮಾನ್, ಅಜಿತ್ ರೈ , ಅರುಣ್‌ಕುಮಾರ್ ಪುತ್ತಿಲ , ಹಕೀಮ್ ಕೂರ್ನಡ್ಕ , ಮನೀಶ್ ಎಸ್ , ಕೆ.ಅಝೀಝ್ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಿಶೋರ್ , ರಾಕೇಶ್ ಕೆ, ನಿಶಾಂತ್‌ಕುಮಾರ್ , ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಸಂತೋಷ್‌ಕುಮಾರ್ ರೈ, ಜಯರಾಮ, ಸಂಶುದ್ದೀನ್, ಸಂದೀಪ್ , ಮಹಮ್ಮದ್ ಶಾಕಿರ್, ಅಬ್ದುಲ್ ಅಝೀಝ್‌ ಮೊದಲಾದವರ ಗಡೀಪಾರಿಗೆ ಇಲಾಖೆ ನೋಟೀಸು ಜಾರಿ ಮಾಡಿರುವುದು ಅತ್ಯಂತ ಒಳ್ಳೆಯ ಬೇಳವಣಿಗೆಯಾಗಿದೆ. ಈ ಪಟ್ಟಿಯಲ್ಲಿರುವವರಲ್ಲಿ ಹೊಡಿ, ಬಡಿ, ಕಡಿ ಎಂದು ಸಮಾಜಕ್ಕೆ ಕರೆ ಕೊಡುವವರು, ಗೋವಿನ ವಿಚಾರದಲ್ಲಿ ಘರ್ಷಣೆ ನಡೆಸುವವರು ಅಥವ ರೌಡಿ ಶೀಟರ್‌ಗಳು ಸೇರಿದ್ದಾರೆ ಎಂಬುದು ಪುತ್ತೂರಿನ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಜಿಲ್ಲೆಯಲ್ಲಿ ದ್ವೇಷವನ್ನು ಹರಡಿ , ದಾಂಧಲೆ ಎಬ್ಬಿಸಿ ಜನರ ನೆಮ್ಮದಿ ಕೆಡಿಸುವ ಇಂತಹಾ ಸಮಾಜದ್ರೋಹಿ ಶಕ್ತಿಗಳನ್ನು ಧರ್ಮಬೇಧವನ್ನು ನೋಡದೆ ಹತ್ತಿಕ್ಕುವ ಸರಕಾರದ ಮತ್ತು ಪೊಲೀಸ್ ಇಲಾಖೆಯ ಕ್ರಮ ಅತ್ಯಂತ ಶ್ಲಾಘನೀಯವಾಗಿದೆ.

ಪೊಲೀಸರು ಜನರ ರಕ್ಷಕರು:

ಕೋಮುವಾದಿ ಸಂಘಟನೆಗಳಲ್ಲಿ ಕೆಲಸ ಮಾಡುವ ಹಲವರನ್ನು ಇಲಾಖೆ ಗುರುತಿಸಿ ಅವರ ಮನೆಗೆ ತೆರಳಿ ಎಚ್ಚರಿಸಿ ಅವರ ಭೇಟಿಯ ಸಾಕ್ಷ್ಯಗಳಾಗಿ ಜಿಪಿಎಸ್ ಸಹಿತ ಫೋಟೋಗಳನ್ನು ಸಂಗ್ರಹಿಸಿ ವರದಿ ನೀಡುತ್ತಿರುವುದೂ ಅತ್ಯಂತ ಸಕಾಲಿಕವಾಗಿದೆ. ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣಿಟ್ಟು ದ್ವೇಷ ಪ್ರಸಾರಕರನ್ನು ನಿಯಂತ್ರಿಸುತ್ತಿದ್ದಾರೆ. ತಪ್ಪು ಮಾಡದಿದ್ದರೆ ಪೊಲೀಸರು ಮನೆಗೆ ಬಂದರೆ ಯಾರೂ ಭಯ ಪಡುವ ಅಗತ್ಯವೇ ಇಲ್ಲ. ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜನರ ರಕ್ಷಕರು. ಜನರ ರಕ್ಷಣೆಗಾಗಿಯೇ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವ್ಯಕ್ತಿಯೂ ಹುಟ್ಟಿದಾಗಿನಿಂದ ಸಾಯುವವರೆಗೆ ಪೊಲೀಸರ ರಕ್ಷಣೆಯಲ್ಲೇ ಬದುಕುತ್ತಾನೆ. ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕೆಡಿಸುವವರ ಮೇಲೆ ನಿಗಾ ಇಡುವ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವುದು ಸರಿಯಲ್ಲ.

ದ್ವೇಷ ಭಾಷಣ ಮಾಡಿ ವಿಧಾನಸೌಧವನ್ನು ಹತ್ತಿದವರು, ಶಾಸಕರಾದವರು, ಸಂಸದರಾದವರು ದ.ಕ. ಕನ್ನಡ ಜಿಲ್ಲೆಯಲ್ಲಿ ಯಾರೂ ಇಲ್ಲ. ದ್ವೇಷ ಭಾಷಣದಿಂದ ಜೀವ ಕಳೆದುಕೊಂಡ ಮತ್ತು ಜೈಲಿಗೆ ಹೋದ ಕುಟುಂಬಗಳ ಕಣ್ಣೀರು ಹಾಗೂ ಜಿಲ್ಲೆಯ ಜನರ ನಿಟ್ಟುಸಿರು ಇವರಿಗೆ ವಸ್ತುಷಃ ಶಾಪವೇ ಆಗಿ ಪರಿಣಮಿಸಿದೆ ಅಂದರೆ ಅತಿಶಯೋಕ್ತಿ ಅಲ್ಲ. ಪುತ್ತೂರಿನ ಪ್ರಜ್ಞಾವಂತ ಜನ ದ್ವೇಷ ಭಾಷಣಕಾರರನ್ನು ತಿರಸ್ಕರಿಸಿ ರಾಜ್ಯ ಸರಕಾರದ ಶಾಂತಿಯ ಪ್ರಯತ್ನಗಳನ್ನು ಬೆಂಬಲಿಸಬೇಕಾಗಿ ಮನವಿ ಮಾಡುತ್ತೇವೆ.

ಪುತ್ತೂರು ಕಾಂಗ್ರೆಸ್ ವಕ್ತಾರರಾದ ರಾಮ ಮೇನಾಲ, ಚಂದ್ರಪ್ರಭಾ ಗೌಡ, ರವೀಂದ್ರ ನೆಕ್ಕಿಲು, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…

ಮಂಗಳೂರು ಪೊಲೀಸ್‌ ಕಮಿಷನ‌ರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರ | ಕಾನೂನು ಎಲ್ಲರಿಗೂ ಒಂದೇ: ಸುಧೀರ್ ಕುಮಾರ್ ರೆಡ್ಡಿ

ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕೋಮು ದ್ವೇಷದ ದಳ್ಳುರಿಗೆ ತುತ್ತಾಗಿರುವ ಮಂಗಳೂರಿಗೆ…