ಪುತ್ತೂರು: ಬಂದ್ ಮಾಡದ ಅಂಗಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು, ಪುತ್ತೂರು ಬಸ್ ನಿಲ್ದಾಣ ಬಳಿ ಜಮಾಯಿಸಿದ ಘಟನೆ ಶುಕ್ರವಾರ 11 ಗಂಟೆ ಸುಮಾರಿಗೆ ನಡೆಯಿತು.
ಅರುಣ್ ಕುಮಾರ್ ಪುತ್ತಿಲ ಅವರು ಪೊಲೀಸರ ಜೊತೆ ಮಾತನಾಡಿ, ಅಂಗಡಿಗಳನ್ನು ಬಂದ್ ಮಾಡಿಸಿ. ಹಾಗೊಂದು ವೇಳೆ ಬಂದ್ ಮಾಡದೇ ಇದ್ದರೆ ಸವಾಲು ಎದುರಿಸಲು ಸಿದ್ಧ ಎಂದರು.
ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ನಾವು ಇಲ್ಲೇ ಕುಳೀತುಕೊಳ್ಳಲು ಸಿದ್ಧ ಎಂದರು.
ಬಳಿಕ ಬಸ್ ನಿಲ್ದಾಣ ಕಟ್ಟಡದ ಒಂದೊಂದು ಅಂಗಡಿಗಳು ಬಂದ್ ಮಾಡಲು ಶುರು ಮಾಡಿದವು. ಅಲ್ಲಿವರೆಗೂ ಹಿಂದೂ ಕಾರ್ಯಕರ್ತರು, ಮುಖಂಡರು ಸ್ಥಳದಲ್ಲೇ ಜಮಾಯಿಸಿದ್ದರು.
ಪೊಲೀಸರು ಬಂದೋಬಸ್ತ್ ನಡೆಸಿದರು.