ಪುತ್ತೂರು: ದ್ವಾರಕಾ ಪ್ರತಿಷ್ಠಾನ, ತುಮಕೂರು ಯಕ್ಷದೀವಿಗೆ ಪ್ರಸ್ತುತಿಯಲ್ಲಿ ನಾಳೆಗೂ ಉಳಿಯಲಿ ನೆಲ – ಜಲ ಧ್ಯೇಯವಾಕ್ಯದ ಚಂದ್ರಮಂಡಲ ಚರಿತೆ ಯಕ್ಷಗಾನ ಮಾ. 30ರಂದು ಸಂಜೆ ಕಿಲ್ಲೆ ಮೈದಾನ ಬಳಿಯ ಚಿಣ್ಣರ ಪಾರ್ಕಿನಲ್ಲಿ ಪ್ರಸ್ತುತಿಗೊಂಡಿತು.ಪ್ರಾರಂಭದಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.ವಿನೂತನ ವಿಭಿನ್ನ ಕಥನದ ಚಂದ್ರಮಂಡಲ ಚರಿತೆ ಪ್ರಸಂಗವನ್ನು ಗಣರಾಜ ಕುಂಬ್ಳೆ ರಾಮಕುಂಜ ಬರೆದಿದ್ದು, ಆರತಿ ಪಟ್ರಮೆ ಅವರು ಸಂಯೋಜನೆ, ತರಬೇತಿ ನೀಡಿರುತ್ತಾರೆ.ಈ ಯಕ್ಷಗಾನದ ವಿಶೇಷವೆಂದರೆ, ತುಮಕೂರಿನ ಕಲಾವಿದರು ಹೆಜ್ಜೆ ಹಾಕಿರುವುದು. ಆರತಿ ಪಟ್ರಮೆ ಹಾಗೂ ಸಿಬ್ಬಂಥಿ ಪದ್ಮನಾಭ್ ಅವರ ಮುಂದಾಳುತ್ವದಲ್ಲಿ ತುಮಕೂರಿನಲ್ಲಿ ಯಕ್ಷದೀವಿಗೆ ಎಂಬ ಹೆಸರಿನಲ್ಲಿ ಒಂದಷ್ಟು ಕಲಾವಿದರನ್ನು ಹುಟ್ಟುಹಾಕುವ ಪ್ರಯತ್ನ ನಡೆದಿದೆ. ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವ ತುಮಕೂರಿನ ಕಲಾವಿದರಿಗೆ ತರಬೇತಿ ನೀಡಿ, ಅವರನ್ನು ಪುತ್ತೂರಿಗೆ ಕರೆದುಕೊಂಡು ಬಂದು ಯಕ್ಷಗಾನ ಪ್ರದರ್ಶನ ನೀಡಲಾಗಿದೆ. ತುಮಕೂರಿನ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರು ಹೆಜ್ಜೆ ಹಾಕಿದರು. ಶನಿವಾರ ಸುಳ್ಯದಲ್ಲಿ ಇದೇ ಪ್ರಸಂಗ ಪ್ರಸ್ತುತಿಗೊಂಡಿತ್ತು.ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳಕೆ:ಕಳೆದ ಹಲವು ವರ್ಷಗಳಿಂದ ಸುಧಾರಿಕೆಯ ಕನಸು ಕಾಣುತ್ತಿದ್ದ ಚಿಣ್ಣರ ಪಾರ್ಕ್ ಇದೀಗ ದ್ವಾರಕಾ ಪ್ರತಿಷ್ಠಾನದ ನಿರ್ವಹಣೆಗೊಳಪಟ್ಟಿದೆ. ದ್ವಾರಕಾ ಪ್ರತಿಷ್ಠಾನದ ವತಿಯಿಂದ ಚಿಣ್ಣರ ಪಾರ್ಕಿನಲ್ಲಿ ಮೊದಲ ಕಾರ್ಯಕ್ರಮವಾಗಿ ಚಂದ್ರಮಂಡಲ ಚರಿತೆ ಯಕ್ಷಗಾನ ಪ್ರಸ್ತುತಿಗೊಂಡಿದೆ. ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇಂಗಿತ ಹೊಂದಿದ್ದು, ಸಾರ್ವಜನಿಕರು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಈ ವೇದಿಕೆಯನ್ನು ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ.
ಚಿಣ್ಣರ ಪಾರ್ಕ್’ನಲ್ಲಿ ಚಂದ್ರಮಂಡಲ ಚರಿತೆ ಯಕ್ಷಗಾನ | ಕರಾವಳಿಯ ಗಂಡು ಕಲೆಗೆ ಹೆಜ್ಜೆ ಹಾಕಿದ ತುಮಕೂರಿನ ಕಲಾವಿದರು
What's your reaction?
- 694c
- 694cc
- 6ai technology
- 6artificial intelegence
- 5avg
- 5bt ranjan
- 5co-operative
- 5crime news
- 5death news
- 4gl
- 4google for education
- 4independence
- 4jewellers
- 4karnataka state
- 3lokayuktha
- 3lokayuktha raid
- 3manipal
- 3minister krishna bairegowda
- 3mla ashok rai
- 2nidana news
- 2ptr tahasildar
- 2puttur
- 2puttur news
- 2puttur tahasildar
- 2revenue
- 1revenue department
- 1revenue minister
- 1society
- 1sowmya
- 1tahasildar
- 0tahasildar absconded
- 0udupi
Related Posts
ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬ್ಬಂದಿ!
ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ…
ಸಜೀಪ: ಶಿಕ್ಷಕರೊಬ್ಬರ ಮೇಲೆ ಜೇನು ನೊಣ ದಾಳಿ!
ಬಂಟ್ವಾಳ: ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ತೆರಳಿದ್ದ ಶಿಕ್ಷಕರೊಬ್ಬರ ಮೇಲೆ ಜೇನು ನೊಣಗಳು…
ಡಾ. ಶಾಂತಾ ಪುತ್ತೂರು ಅವರಿಗೆ ಆಕ್ಸಿಸ್ ಮ್ಯಾಕ್ಸ್ ಇನ್ಸೂರೆನ್ಸ್ ಶಿಕ್ಷಾರತ್ನ ಪ್ರಶಸ್ತಿ
ಪುತ್ತೂರು: ಕಬಕ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಡಾ.ಶಾಂತಾ ಪುತ್ತೂರು ಅವರಿಗೆ ಆಕ್ಸಿಸ್ ಮ್ಯಾಕ್ಸ್…
ವಿಕಸಿತ ಭಾರತ ಯುವ ಸಂಸತ್ ಸ್ಪರ್ಧೆಗೆ ನೊಂದಣಿ ಆರಂಭ
ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪ್ರಮುಖ ಉಪಕ್ರಮವಾದ ವಿಕಸಿತ ಭಾರತ ಯುವ…
ಸುಳ್ಯ: ಸಮೀಕ್ಷೆ ವೇಳೆ ಶಿಕ್ಷಕಿಯ ಮೇಲೆರಗಿದ ನಾಯಿ!
ಸುಳ್ಯ: ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿಯ ಮೇಲೆ ನಾಯಿ ದಾಳಿ ನಡೆಸಿದ ಘಟನೆ ಸುಳ್ಯ ತಾಲೂಕಿನ…
ಕಲಿಯುತ್ತಾ ನಲಿ – ಮಕ್ಕಳ ದಸರಾ ಮೋಜಿನ ಶಿಬಿರ ಉದ್ಘಾಟನೆ
ಉಪ್ಪಿನಂಗಡಿ: ರಾಮನಗರ ಮೇಘಾಸ್ ಕಿಡ್ಸ್ ವರ್ಲ್ಡ್ ಹಾಗೂ ಜ್ಞಾನ ಬೆಳಕು ಚಾರಿಟೇಬಲ್ ಟ್ರಸ್ಟ್…
ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅವರಿಗೆ ವಿಶ್ವಕರ್ಮ ಶ್ರೀ ಪ್ರಶಸ್ತಿ ಪ್ರದಾನ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಶ್ರೀ ವಿರಾಟ್ ವಿಶ್ವಕರ್ಮ…
ಕೆಂಪು ಕಲ್ಲು, ಮರಳು ಸಮಸ್ಯೆ: ಪರಿಹಾರಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ| ಕಾರ್ಮಿಕರು ಬೀದಿ ಪಾಲು, ಕಾಂಗ್ರೆಸ್ ಭರವಸೆ ಸುಳ್ಳು: ಕುಂಪಲ
ಮಂಗಳೂರು: ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ…
ಕಮೀಷನರೇಟ್ ಮಾತ್ರವಲ್ಲ ಎಸ್ಪಿ ವ್ಯಾಪ್ತಿಯಲ್ಲೂ ಪೊಲೀಸರ ವರ್ಗಾವಣೆ! ಎಷ್ಟು ಮಂದಿ ಪೊಲೀಸರ ವರ್ಗಾವಣೆ ಗೊತ್ತೇ?
ಮಂಗಳೂರು: ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರ ವರ್ಗಾವಣೆ ಬೆನ್ನಿಗೇ ಎಸ್ಪಿ…
ಭರತ್ ಕುಮ್ಡೇಲ್ ಮನೆ ಶೋಧ ನಡೆಸಿದ ಪೊಲೀಸರು..!!!
ಬಂಟ್ವಾಳ: ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಸಂಘಟನೆ ಮುಖಂಡ…