ಪುತ್ತೂರು: ದ್ವಾರಕಾ ಪ್ರತಿಷ್ಠಾನ, ತುಮಕೂರು ಯಕ್ಷದೀವಿಗೆ ಪ್ರಸ್ತುತಿಯಲ್ಲಿ ನಾಳೆಗೂ ಉಳಿಯಲಿ ನೆಲ – ಜಲ ಧ್ಯೇಯವಾಕ್ಯದ ಚಂದ್ರಮಂಡಲ ಚರಿತೆ ಯಕ್ಷಗಾನ ಮಾ. 30ರಂದು ಸಂಜೆ ಕಿಲ್ಲೆ ಮೈದಾನ ಬಳಿಯ ಚಿಣ್ಣರ ಪಾರ್ಕಿನಲ್ಲಿ ಪ್ರಸ್ತುತಿಗೊಂಡಿತು.ಪ್ರಾರಂಭದಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.ವಿನೂತನ ವಿಭಿನ್ನ ಕಥನದ ಚಂದ್ರಮಂಡಲ ಚರಿತೆ ಪ್ರಸಂಗವನ್ನು ಗಣರಾಜ ಕುಂಬ್ಳೆ ರಾಮಕುಂಜ ಬರೆದಿದ್ದು, ಆರತಿ ಪಟ್ರಮೆ ಅವರು ಸಂಯೋಜನೆ, ತರಬೇತಿ ನೀಡಿರುತ್ತಾರೆ.ಈ ಯಕ್ಷಗಾನದ ವಿಶೇಷವೆಂದರೆ, ತುಮಕೂರಿನ ಕಲಾವಿದರು ಹೆಜ್ಜೆ ಹಾಕಿರುವುದು. ಆರತಿ ಪಟ್ರಮೆ ಹಾಗೂ ಸಿಬ್ಬಂಥಿ ಪದ್ಮನಾಭ್ ಅವರ ಮುಂದಾಳುತ್ವದಲ್ಲಿ ತುಮಕೂರಿನಲ್ಲಿ ಯಕ್ಷದೀವಿಗೆ ಎಂಬ ಹೆಸರಿನಲ್ಲಿ ಒಂದಷ್ಟು ಕಲಾವಿದರನ್ನು ಹುಟ್ಟುಹಾಕುವ ಪ್ರಯತ್ನ ನಡೆದಿದೆ. ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವ ತುಮಕೂರಿನ ಕಲಾವಿದರಿಗೆ ತರಬೇತಿ ನೀಡಿ, ಅವರನ್ನು ಪುತ್ತೂರಿಗೆ ಕರೆದುಕೊಂಡು ಬಂದು ಯಕ್ಷಗಾನ ಪ್ರದರ್ಶನ ನೀಡಲಾಗಿದೆ. ತುಮಕೂರಿನ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರು ಹೆಜ್ಜೆ ಹಾಕಿದರು. ಶನಿವಾರ ಸುಳ್ಯದಲ್ಲಿ ಇದೇ ಪ್ರಸಂಗ ಪ್ರಸ್ತುತಿಗೊಂಡಿತ್ತು.ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳಕೆ:ಕಳೆದ ಹಲವು ವರ್ಷಗಳಿಂದ ಸುಧಾರಿಕೆಯ ಕನಸು ಕಾಣುತ್ತಿದ್ದ ಚಿಣ್ಣರ ಪಾರ್ಕ್ ಇದೀಗ ದ್ವಾರಕಾ ಪ್ರತಿಷ್ಠಾನದ ನಿರ್ವಹಣೆಗೊಳಪಟ್ಟಿದೆ. ದ್ವಾರಕಾ ಪ್ರತಿಷ್ಠಾನದ ವತಿಯಿಂದ ಚಿಣ್ಣರ ಪಾರ್ಕಿನಲ್ಲಿ ಮೊದಲ ಕಾರ್ಯಕ್ರಮವಾಗಿ ಚಂದ್ರಮಂಡಲ ಚರಿತೆ ಯಕ್ಷಗಾನ ಪ್ರಸ್ತುತಿಗೊಂಡಿದೆ. ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇಂಗಿತ ಹೊಂದಿದ್ದು, ಸಾರ್ವಜನಿಕರು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಈ ವೇದಿಕೆಯನ್ನು ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ.
ಚಿಣ್ಣರ ಪಾರ್ಕ್’ನಲ್ಲಿ ಚಂದ್ರಮಂಡಲ ಚರಿತೆ ಯಕ್ಷಗಾನ | ಕರಾವಳಿಯ ಗಂಡು ಕಲೆಗೆ ಹೆಜ್ಜೆ ಹಾಕಿದ ತುಮಕೂರಿನ ಕಲಾವಿದರು
Related Posts
ಎಸೆಸ್ಸೆಲ್ಸಿ ಪರೀಕ್ಷೆ ಬರೆಯಲು ನಿರಾಕರಿಸಿದ ವಿದ್ಯಾಸಂಸ್ಥೆ: 4 ಪರೀಕ್ಷೆಗೆ ಗೈರು! ವಿದ್ಯಾರ್ಥಿನಿಯರ ಮನವೊಲಿಸಿ ಪರೀಕ್ಷೆ ಬರೆಸಿದ ಬಿಇಓ!
ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳಿಗೆ…
ದ.ಕ. ಜಿಲ್ಲೆಯ 25 ಮಂದಿ ಪೊಲೀಸರಿಗೆ ಮುಖ್ಯಮಂತ್ರಿ ಪದಕ
ಮಂಗಳೂರು: ಪೊಲೀಸ್ ಇಲಾಖೆಯಲ್ಲಿನ ಸೇವೆಯನ್ನು ಪರಿಗಣಿಸಿ 2024ನೆ ಸಾಲಿನ ಮುಖ್ಯಮಂತ್ರಿ ಪದಕದ…
ಜೈಲ್ ಜಾಮರ್ ಸಮಸ್ಯೆ: ನಾಗರಿಕರಿಂದ ಜೈಲಿಗೆ ಮುತ್ತಿಗೆ ಹಾಕಲು ಯತ್ನ!!
ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಿದ್ದರಿಂದ ಸುತ್ತಲಿನ ಸುಮಾರು 1 ಕಿ. ಮೀ.…
ಮೀನು ಕಚ್ಚಿ ಬಲಗೈ ಕಳೆದು ಕೊಂಡ ಯುವಕ!!
ಯುವಕನೋರ್ವ ಮೀನು ಕಚ್ಚಿದ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿದ್ದು ಇದರ ಪರಿಣಾಮ ಕೊನೆಗೆ ಆತನ…
ಉಡುಪಿ: ಮೀನು ಕಳ್ಳತನ ಆರೋಪ; ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ.!!
ಮೀನುಗಾರಿಕಾ ಬೋಟ್ನಿಂದ ದುಬಾರಿ ಬೆಲೆಯ ಸಿಗಡಿ ಮೀನು ಕದ್ದಿರುವ ಆರೋಪದಲ್ಲಿ ಮಹಿಳೆಯೊಬ್ಬರಿಗೆ…
ಪಿಲಿಕುಳ ಮೃಗಾಲಯ ತಾತ್ಕಾಲಿಕ ಬಂದ್?? ಹೈಕೋರ್ಟ್ ಮೊರೆ ಹೋದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ!
ಪಿಲಿಕುಳ ಜೈವಿಕ ಉದ್ಯಾನದಲ್ಲಿ ನಿರ್ವಹಣಾ ಅವ್ಯವಸ್ಥೆ ಮತ್ತು ನಿಯಮ ಉಲ್ಲಂಘನೆಯ ಬಗ್ಗೆ ಗಂಭೀರ…
ಮಂಗಳೂರು: ಜೈಲಿನಲ್ಲಿ ಕೈದಿಗಳಿಗೆ ಫುಡ್ ಪಾಯಿಸನ್, ಹೊಟ್ಟೆ ನೋವಿನಿಂದ ಅಸ್ವಸ್ಥ!
ಜೈಲಿನಲ್ಲಿ ವಿಚಾರಣಾಧೀನ ಖೈದಿಗಳು ಅಸ್ವಸ್ಥರಾಗಿರುವ ಘಟನೆ ಇಂದು ಮಧ್ಯಾಹ್ನ ಮಂಗಳೂರಿನ ಕೇಂದ್ರ…
ಮಂಗಳೂರು: ಮರದ ಕೊಂಬೆ ಬಿದ್ದು ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ!
ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ನಗರದ…
ಸ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ “ನಮ್ಮ ನಡಿಗೆ ನಾಟಿ ವೈದ್ಯರ ಮನೆಯ ಕಡೆಗೆ ” ಕಾರ್ಯಕ್ರಮ
ದ.ಕ. ಜಿ. ಪಂ ಹಿ ಪ್ರಾ ಶಾಲೆ ಸಜಂಕಾಡಿಯ ವಿದ್ಯಾರ್ಥಿಗಳಿಗೆ ಪರಂಪರಾಗತ ನಾಟಿ ವೈದ್ಯ…
ಕೋತಿ ಕಾಟಕ್ಕೆ ಅಂಡಮಾನ್ ದ್ವೀಪದ ಪರಿಹಾರ!! ಮಣ್ಣು ತಪಾಸಣೆಗೆ ಪುತ್ತೂರಿನಲ್ಲಿ ಮೊಬೈಲ್ ಕೇಂದ್ರ | ಕ್ಯಾಂಪ್ಕೋದ ನವೀಕೃತ ಪುತ್ತೂರು ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಕೊಡ್ಗಿ
ಪುತ್ತೂರು: ಸಣ್ಣ ಮಟ್ಟದ ಮಣ್ಣು ತಪಾಸಣೆ ಯಂತ್ರವನ್ನು ಕ್ಯಾಂಪ್ಕೊ ಖರೀದಿಸಿದ್ದು, ಮೊಬೈಲ್…