ಅಪಘಾತ

ಕೃಷಿ ಮೇಳದಲ್ಲಿ ಟ್ರ್ಯಾಕ್ಟರ್‌ ಮೈಮೇಲೆ ಬಿದ್ದು ಓರ್ವ ಸಾವು!!

ಈ ಸುದ್ದಿಯನ್ನು ಶೇರ್ ಮಾಡಿ

ಕ್ಯಾಂಟ‌ರ್ ವಾಹನದಿಂದ ಟ್ರ್ಯಾಕ್ಟರ್ ಇಳಿಸುವಾಗ ನಿಯಂತ್ರಣ ತಪ್ಪಿ ಮೈಮೇಲೆ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಧಾರವಾಡ ಕೃಷಿ ಮೇಳದ ಅಂಗಳದಲ್ಲಿ ಶನಿವಾರ ನಡೆದಿದೆ.

akshaya college

ತುಮಕೂರು ಮೂಲದ ಪರಶುರಾಮ ಎಂ. (32) ಮೃತಪಟ್ಟವರು. ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ತಂದ ಟ್ರ್ಯಾಕ್ಟರ್ ಕ್ಯಾಂಟ‌ರ್ ವಾಹನದಿಂದ ಇಳಿಸುವಾಗ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts