ಇಚ್ಚಂಪಾಡಿ ಗ್ರಾಮದ ಕೆಡೆಂಬೇಲು ನಿವಾಸಿ ಜಯಾನಂದ ಶೆಟ್ಟಿ ಅವರ ಪುತ್ರ ಚೇತನ್ ಶೆಟ್ಟಿ (21) ಮೃತಪಟ್ಟವರು. ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಆಗಿ ಉದ್ಯೋಗದಲ್ಲಿದ್ದ ಚೇತನ್ ರವಿವಾರ ಇಚ್ಚಂಪಾಡಿಯಲ್ಲಿ ಯುವಕರ ತಂಡದ ಜತೆಗೂಡಿ ಕ್ರಿಕೆಟ್ ಆಟವಾಡಿ ಬಳಿ ಅಪರಾಹ್ನದ ವೇಳೆಗೆ ಇಚ್ಛಂ ಪಾಡಿಯ ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ನದಿಗೆ ಇಳಿದಿದ್ದರು.
ನದಿ ನೀರಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕಿನ ಇಚ್ಚಂಪಾಡಿಯಲ್ಲಿ ರವಿವಾರ ಅಪರಾಹ್ನ ಸಂಭವಿಸಿದೆ.ಈ ವೇಳೆ ನೀರಿನ ಆಳ ಅರಿಯದೆ ಮುಳುಗಿ ಮೃತಪಟ್ಟರು.
ಸ್ಥಳೀಯರಾದ ಜಾಯ್ ಅವರು ಮೃತದೇಹವನ್ನು ನೀರಿನಿಂದ ಮೇಲೆತ್ತಿದರು. ಕಡಬ ಸಮುದಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೇತನ್ ಅವರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ. ಅವರು ಉತ್ತಮ ಕಬಡ್ಡಿ, ಕ್ರಿಕೆಟ್ ಆಟಗಾರನಾಗಿ ಹೆಸರು ಗಳಿಸಿದ್ದರು