Gl harusha
ಅಪರಾಧ

ಸೀಬೆ ಹಣ್ಣು ಹಿಡಿದು  ಮಗನ  ಹಾಸ್ಟೆಲ್‌ಗೆ ತೆರಳಿದ ತಾಯಿಗೆ ಆಘಾತ, ಕಣ್ಣೆದುರೇ ಕಂಡ ದುರಂತ

ಪರೀಕ್ಷೆಗೂ ಮೊದಲು ಮಗನ ಭೇಟಿಯಾಗಿ ಮಗನಿಗೆ ಧೈರ್ಯ ತುಂಬಲು ತಾಯಿ ಹಾಸ್ಟೆಲ್‌ಗೆ ತೆರಳಿದ್ದಾಳೆ. ಹೋಗುವಾಗ ಮಗನ ನೆಚ್ಚಿನ ಸೀಬೆ ಹಣ್ಣು ಒಯ್ದಿದ್ದಾಳೆ. ಆದರೆ ಹಾಸ್ಟೆಲ್‌ ತಲುಪಿದ ತಾಯಿ ಆಘಾತಗೊಂಡಿದ್ದಾಳೆ. ಕಣ್ಣೆದುರೆ ಕಂಡ ಮಗನ ದುರಂತದಿಂದ 3 ಗಂಟೆ ಪ್ರಜ್ಞೆ ತಪ್ಪಿದ್ದಾಳೆ.

ಈ ಸುದ್ದಿಯನ್ನು ಶೇರ್ ಮಾಡಿ

ಕೋಟಾ:  ಪರೀಕ್ಷೆ ತಯಾರಿ ನಡೆಸುತ್ತಿದ್ದ ಮಗನ ಜೊತೆ ಫೋನ್ ಮೂಲಕ ಮಾತನಾಡಿದ ತಾಯಿಗೆ ಸಮಾಧಾನವಾಗಿಲ್ಲ.

srk ladders
Pashupathi
Muliya

ಪ್ರಮುಖ ಪರೀಕ್ಷೆ, ಹೀಗಾಗಿ ಮಗನ ಭೇಟಿಯಾಗಿ ಧೈರ್ಯ ತುಂಬುವ ಅಗತ್ಯವಿದೆ ಎಂದು ತಾಯಿ ಪುತ್ರನ ಹಾಸ್ಟೆಲ್‌ಗೆ ತೆರಳಿದ್ದಾಳೆ. ಬಸ್‌ ಹಿಡಿದು ಹೊರಟ ತಾಯಿ ಮಗನ ಹಾಸ್ಟೆಲ್ ತಲುಪಿದ್ದಾಳೆ. ಆದರೆ ಮಗನ ಹಾಸ್ಟೆಲ್ ಬಳಿ ಕೋಣೆ ಬಳಿ ಬಂದ ತಾಯಿಗೆ ಆಘಾತವಾಗಿದೆ. ಕಾರಣ ಕೆಲ ಹೊತ್ತಿನ ಮುಂಚೆ ಮಗ ಬದುಕು ಅಂತ್ಯಗೊಳಿಸಿದ್ದ. ಮನೆಯಲ್ಲಿ ಬೆಳೆದಿದ್ದ,  ಸೀಬೆ ಹಣ್ಣು ಹಿಡಿದು ಹಾಸ್ಟೆಲ್‌ಗೆ ಆಗಮಿಸಿದ ತಾಯಿ ಮಗನ ದುರಂತ ಕಣ್ಣೆದರೇ ನೋಡಿ ಆಘಾತವಾಗಿದೆ. ಕುಸಿದು ಬಿದ್ದ ತಾಯಿ 3 ಗಂಟೆ ಪ್ರಜ್ಞೆ ಇಲ್ಲದೆ ಆಸ್ಪತ್ರೆ ದಾಖಲಾದ ಘಟನೆ ಕೋಟಾದಲ್ಲಿ ನಡೆದಿದೆ. 

ಕೋಟಾದಲ್ಲಿ ವಿದ್ಯಾರ್ಥಿಗಳ ದುರಂತ ಸರಣಿ ಮುಂದುವರಿದಿದೆ. ಒಬ್ಬರ ಹಿಂದೊಬ್ಬರು ದುರಂತ ಅಂತ್ಯ ಕಾಣುತ್ತಿದ್ದಾರೆ. ಕಳೆದೊಂದು ವರ್ಷದಿಂದ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಈ ಸಾಲಿಗೆ ಗೌವ್ಹಾಟಿಯ 17 ವರ್ಷದ ವಿದ್ಯಾರ್ಥಿ ಸೇರಿಕೊಂಡಿದ್ದಾನೆ. ಗೌವ್ಹಾಟಿಯಲ್ಲಿ ನೆಲೆಸಿರುವ ವಿದ್ಯಾರ್ಥಿಯ ಪೋಷಕರು ಮಗನ ಉತ್ತಮ ವಿದ್ಯಾಭ್ಯಾಸಕ್ಕೆ ಶ್ರಮಪಟ್ಟು ದುಡಿಯುತ್ತಿದ್ದಾರೆ. ಆದರೆ ಇರೋ ಒಬ್ಬನೇ ಮಗ ಇದೀಗ ಕೋಟಾ ಹಾಸ್ಟೆಲ್‌ನಲ್ಲೇ ಕೊನೆಯಾಗಿದ್ದಾನೆ.

ಜೆಇಇ ಪ್ರಮುಖ ಪರೀಕ್ಷೆಗೆ ವಿದ್ಯಾರ್ಥಿ ತಯಾರಿ ಮಾಡಿಕೊಳ್ಳುತ್ತಿದ್ದ. ಗೌವ್ಹಾಟಿಯಲ್ಲಿ ನೆಲೆಸಿರುವ ತಾಯಿ ಫೋನ್ ಮೂಲಕ ಮಗನ ಜೊತೆ ಮಾತನಾಡಿದ್ದಾರೆ. ಆದರೆ ಈ ಮಾತುಗಳು ತಾಯಿಗೆ ಯಾಕೋ ಸಮಾಧಾನ ತಂದಿಲ್ಲ. ಆತನ ಮಾತುಗಳಲ್ಲಿ ಧೈರ್ಯ, ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಪರೀಕ್ಷೆಗೆ ಮೊದಲು ಈ ರೀತಿ ಧೈರ್ಯ ಹಾಗೂ ಆತ್ಮವಿಶ್ವಾಸದ ಕೊರತೆ ಇದ್ದರೆ, ಪರೀಕ್ಷೆ ಹೇಗೆ ಬರೆಯಲು ಸಾಧ್ಯ ಎಂದುಕೊಂಡ ತಾಯಿ ಮಗನ ಭೇಟಿಯಾಗಲು ಕೋಟಾದ ಹಾಸ್ಟೆಲ್‌ಗೆ ತೆರಳಲು ನಿರ್ಧರಿಸಿದ್ದಾರೆ.

ಎಂಜಿನೀಯರ್ ಎಂಟ್ರಾನ್ಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಈ ಅಸ್ಸಾಂ ವಿದ್ಯಾರ್ಥಿ ಕಳೆದ 2 ವರ್ಷದಿಂದ ಕೋಟಾ ಹಾಸ್ಟೆಲ್‌ನಲ್ಲಿದ್ದ. ಇತ್ತ ವಿದ್ಯಾರ್ಥಿಯ ತಾಯಿ ಬಸ್‌ ಹಿಡಿದು ನೇರವಾಗಿ ಕೋಟಾಗೆ ತೆರಳಿದ್ದಾರೆ. ಹೀಗೆ ತೆರಳುವಾಗ ಮನೆಯಲ್ಲಿ ಬೆಳೆದ ಮಗನ ನೆಚ್ಚಿನ ಸೀಬೆ ಹಣ್ಣನ್ನು ಒಯ್ದಿದ್ದಾ ಸೀಬೆ ಹಣ್ಣು ಮಗನ ಇಷ್ಟದ ತಿಂಡಿಗಳನ್ನು ತೆಗೆದುಕೊಂಡು ತಾಯಿ ಬಸ್ ಮೂಲಕ ಕೋಟಾ ತಲುಪಿದ್ದಾಳೆ.

ಕೋಟಾ ಆಸ್ಪತ್ರೆಗೆ ಆಟೋದಲ್ಲಿ ಬಂದಿಳಿದ ತಾಯಿ ಎಲ್ಲವೂ ಸರಿಯಿಲ್ಲ ಎಂದು ಅನಿಸಿದೆ. ಕಾರಣ ತಾಯಿ ಹಾಸ್ಟೆಲ್‌ ಬಳಿ ತೆರಳುತ್ತಿದ್ದಂತೆ ಪೊಲೀಸರು, ಹಾಸ್ಟೆಲ್ ಸಿಬ್ಬಂದಿಗಳು ಕಾಣಿಸಿಕೊಂಡಿದ್ದಾರೆ. ನೇರವಾಗಿ ಮಗನ ಹಾಸ್ಟೆಲ್ ಬ್ಲಾಕ್ ಬಳಿ ಬಂದಿದ್ದಾರೆ. ಈ ವೇಳೆ ಕೋಣೆಯ ಬಳಿ ಬರುತ್ತಿದ್ದಂತೆ ಪೊಲೀಸರು, ಒಂದಷ್ಟು ಸಿಬ್ಬಂಧಿಗಳು ವಿದ್ಯಾರ್ಥಿಗಳು ಸೇರಿದ್ದಾರೆ. ತಾಯಿಗೆ ಆತಂಕ ಹೆಚ್ಚಾಗತೊಡಗಿದೆ. ಹತ್ತಿರ ಬಂದು ನೋಡಿದರೆ ತನ್ನದೇ ಮಗ ದುರಂತ ಅಂತ್ಯ ಕಂಡಿದ್ದ. ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿ ಈ ಆಘಾತ ತಾಳಲಾರದೆ ಪ್ರಜ್ಞೆ ತಪ್ಪಿ ಕುಸಿದು ಬಿದಿದ್ದಾರೆ. ಪೊಲೀಸರು ಹಾಗೂ ಸಿಬ್ಬಂದಿಗಳು ತಾಯಿಯನ್ನು ಪಕ್ಕದ ಕೋಣೆಯಲ್ಲಿ ಮಲಗಿಸಿ ವೈದ್ಯರಿಗೆ ಸೂಚಿಸಿದ್ದಾರೆ.

3 ಗಂಟೆ ಪ್ರಜ್ಞೆ ಇಲ್ಲದೆ ಮಲಗಿದ ತಾಯಿ ಬಳಿಕ ಚೇತರಿಸಿಕೊಂ ಎದ್ದಿದ್ದಾರೆ. ಆದರೆ ಮಗನಿಲ್ಲದ ನೋವು ತಾಳಲಾರದೆ ಕೂಗಿಕೊಂಡಿದ್ದಾರೆ. ದೆಹಲಿಯಲ್ಲಿರುವ ಸಂಬಂಧಿಕರಿಗೆ ಮಾಹಿ ನೀಡುವಂತೆ ತಾಯಿ ಪೊಲೀಸರಿಗೆ ಸೂಚಿಸಿದ್ದಾರೆ. ಮಗನಿಗಾ ತಂದ ತಿಂಡಿ, ಸೀಬೆ ಹಣ್ಣು ನೋಡಿ ಮತ್ತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕೋಟಾದಲ್ಲಿ ವಿದ್ಯಾರ್ಥಿಗಳ ದುರಂತ ಅಂತ್ಯಕ್ಕೆ ಕೊನೆ ಇಲ್ಲದಾಗಿದೆ. ಈ ಘಟನೆಗೂ 2 ಗಂಟೆ ಮೊದಲು 24 ವರ್ಷದ ವೈದ್ಯೆ ವಿದ್ಯಾರ್ಥಿನಿ ದುರಂತ ಅಂತ್ಯ ಕಂಡಿದ್ದಳು.


ಈ ಸುದ್ದಿಯನ್ನು ಶೇರ್ ಮಾಡಿ

Related Posts