ವೃದ್ಧರೋರ್ವರನ್ನು ನೆರೆಮನೆಯ ನಿವಾಸಿ ತಲೆಗೆ ಹೊಡೆದು ಕೊಲೆಗೈದ ಘಟನೆ ರವಿವಾರ ರಾತ್ರಿ ಕಾಸರಗೋಡಿನ ಕರಿಂದಳ ಎಂಬಲ್ಲಿ ನಡೆದಿದೆ.
ಕಂಬಳಪಳ್ಳಿ ಚಿತ್ರಮೂಲೆ ನಿವಾಸಿ ಕಣ್ಣನ್(80) ಕೊಲೆಯಾದವರು. ಮನೆ ಸಮೀಪದ ಶ್ರೀಧರ (45) ಕೊಲೆ ಆರೋಪಿ.
ಮರದ ತುಂಡಿನಿಂದ ತಲೆಗೆ ಬಡಿದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಕಾರಣ ಏನೆಂಬುದು ಸ್ಪಷ್ಟಗೊಂಡಿಲ್ಲ.
ನೀಲೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಾಗಿದೆ.