Gl
ದೇಶಪ್ರಚಲಿತಸ್ಥಳೀಯ

ವಿಜಯ್ ಮಲ್ಯ ಸೋಲಲು ಇದೇ ಕಾರಣವಂತೆ!! ಮಲ್ಯರ ದೀರ್ಘಕಾಲದ ಸ್ನೇಹಿತೆ ಬಿಚ್ಚಿಟ್ಟ ಸತ್ಯ ಏನು ಗೊತ್ತೆ??

ವಿಜಯ್ ಮಲ್ಯ ದೇಶ ಬಿಟ್ಟು ಹೋಗಿ ಹಲವು ವರ್ಷಗಳಾದರೂ ಬಹಳ ಜನರ ಚಿತ್ತದಿಂದ ಯಾವತ್ತೂ ಮರೆಯಾಗದ ವ್ಯಕ್ತಿತ್ವ ಅವರದ್ದು. ಐಪಿಎಲ್ನ ಆರಂಭದ ದಿನಗಳಲ್ಲಿ ಆರ್ಸಿಬಿ ಜೊತೆ ರಂಗುರಂಗಾಗಿದ್ದ ವಿಜಯ್ ಮಲ್ಯ ಆರ್ಥಿಕ ಅಪರಾಧಿಯಾಗಿ ವಿದೇಶಕ್ಕೆ ಹೋಗಿ ನೆಲಸುವಂತಾಗಿದೆ. ವಿಜಯ್ ಮಲ್ಯ ಕಥೆ ಯಾಕೆ ಹೀಗಾಯಿತು, ಅವರು ನಷ್ಟ ಕಾಣಲು ಏನು ಕಾರಣ ಎಂಬುದನ್ನು ಕಿರಣ್ ಮಜುಮ್ದಾರ್ ವಿವರಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯ್ ಮಲ್ಯ ದೇಶ ಬಿಟ್ಟು ಹೋಗಿ ಹಲವು ವರ್ಷಗಳಾದರೂ ಬಹಳ ಜನರ ಚಿತ್ತದಿಂದ ಯಾವತ್ತೂ ಮರೆಯಾಗದ ವ್ಯಕ್ತಿತ್ವ ಅವರದ್ದು. ಐಪಿಎಲ್ನ ಆರಂಭದ ದಿನಗಳಲ್ಲಿ ಆರ್ಸಿಬಿ ಜೊತೆ ರಂಗುರಂಗಾಗಿದ್ದ ವಿಜಯ್ ಮಲ್ಯ ಆರ್ಥಿಕ ಅಪರಾಧಿಯಾಗಿ ವಿದೇಶಕ್ಕೆ ಹೋಗಿ ನೆಲಸುವಂತಾಗಿದೆ. ವಿಜಯ್ ಮಲ್ಯ ಕಥೆ ಯಾಕೆ ಹೀಗಾಯಿತು, ಅವರು ನಷ್ಟ ಕಾಣಲು ಏನು ಕಾರಣ ಎಂಬುದನ್ನು ಕಿರಣ್ ಮಜುಮ್ದಾರ್ ವಿವರಿಸಿದ್ದಾರೆ.

Pashupathi

ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಅವರು ವಿಜಯ್ ಮಲ್ಯರ ದೀರ್ಘಕಾಲದ ಸ್ನೇಹಿತೆ. ಅವರನ್ನು ವೈಯಕ್ತಿಕವಾಗಿ ಮತ್ತು ಔದ್ಯಮಿಕವಾಗಿ ಹತ್ತಿರದಿಂದ ಬಲ್ಲವರು. ನಿಖಿಲ್ ಕಾಮತ್ ಅವರ ಪೋಡ್ಕ್ಯಾಸ್ಟ್ನಲ್ಲಿ ಪಾಲ್ಗೊಂಡು ಮಾತನಾಡುತ್ತಾ ಕಿರಣ್ ಮಜುಮ್ದಾರ್ ತಮ್ಮ ಹಳೆಯ ಸ್ನೇಹಿತನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

akshaya college

ವಿಜಯ್ ಮಲ್ಯ ಕಿಂಗ್ಫಿಶರ್ ಬ್ರ್ಯಾಂಡ್ ಸೃಷ್ಟಿಸಿ ಗೆದ್ದರು. ಆದರೆ, ಕಿಂಗ್ಫಿಶರ್ ಏರ್ಲೈನ್ಸ್ ಶುರು ಮಾಡಿ ತಪ್ಪೆಸಗಿದರು. ಏರ್ಲೈನ್ಸ್ ಬಗ್ಗೆ ಅವರಿಗೆ ಬಹಳ ಪ್ಯಾಶನ್ ಇತ್ತು. ಸಂಸ್ಥೆ ನಷ್ಟದ ಮೇಲೆ ನಷ್ಟ ಕಂಡರೂ ಅವರ ನಂಬಿಕೆ ಕದಲಿಲ್ಲ. ಏನಾದರೂ ಗೆಲ್ಲುತ್ತೇನೆ ಎನ್ನುವ ಅವರ ಹುಂಬತನವೇ ಅವರಿಗೆ ಮುಳುವಾಯಿತು ಎಂದು ಕಿರಣ್ ಮಜುಮ್ದಾರ್ ಹೇಳಿದ್ದಾರೆ.

ಕಿಂಗ್ಫಿಶರ್ ಏರ್ಲೈನ್ಸ್ನಲ್ಲಿ ಸ್ಟಾಫ್ ಸಂಖ್ಯೆ ತಗ್ಗಿಸಿ, ವೆಚ್ಚವನ್ನು ಕಡಿಮೆ ಮಾಡಿ, ನಷ್ಟ ಕಡಿಮೆ ಮಾಡಿ ಎಂದು ನಾನು ಸಲಹೆ ನೀಡಿದ್ದೆ. ಆದರೆ ಅದನ್ನು ಒಪ್ಪಲು ಅವರು ಸಿದ್ಧರಿರಲಿಲ್ಲ. ತಾನೇನು ಮಾಡುತ್ತಿದ್ದೇನೆ ತನಗೆ ಗೊತ್ತು ಎನ್ನುತ್ತಿದ್ದರು. ವಾಸ್ತವವನ್ನು ಒಪ್ಪುವ ಮನಃಸ್ಥಿತಿ ಅವರಿಗೆ ಆಗ ಇರಲಿಲ್ಲ ಎಂದು ಬಯೋಕಾನ್ ಮುಖ್ಯಸ್ಥೆ ಈ ಪಾಡ್ಕ್ಯಾಸ್ಟ್ನಲ್ಲಿ ತಿಳಿಸಿದ್ದಾರೆ.

ವಿಜಯ್ ಮಲ್ಯ ಒಳ್ಳೆಯ ಉದ್ಯಮಿ. ತಾವು ನೀಡಬೇಕಿದ್ದ ಸಾಲವನ್ನು ಬಹುತೇಕ ಹಿಂದಿರುಗಿಸಿದ್ದಾರೆ. ಆದರೂ ಸರ್ಕಾರ ಅವರನ್ನು ಯಾಕೆ ಟಾರ್ಗೆಟ್ ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ. ವಿಜಯ್ ಮಲ್ಯ ಇಲ್ಲಿ ಇರಬೇಕಾದವರು. ಅವರಿಗೆ ಇಲ್ಲಿ ಬರಲು ಅವಕಾಶ ಕೊಡಬೇಕು. ಅವರು ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡಬಲ್ಲುರು ಎಂದು ನಿಖಿಲ್ ಕಾಮತ್ ಜೊತೆಗಿನ ಸಂದರ್ಶನದಲ್ಲಿ ಕಿರಣ್ ಮಜುಮ್ದಾರ್ ಅಭಿಪ್ರಾಯಪಟ್ಟಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

 ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ| ರೂಪಾಯಿಗೆ ಬಲ ನೀಡಿದ ಕ್ರಮವನ್ನು‌ ಬಹಿರಂಗಪಡಿಸಿದ ವಿನಿಮಿಯ ದತ್ತಾಂಶ!

ಅಮೆರಿಕದ ಡಾಲರ್ ಎದುರು ಸೋಮವಾರ ಭಾರತೀಯ ರೂಪಾಯಿ ಬಲಗೊಂಡಿದ್ದು, ಜಾಗತಿಕವಾಗಿ ಅಮೆರಿಕದ ಕರೆನ್ಸಿ…

ಮುಸ್ಲಿಂ ಯುವಕನನ್ನು ಹೊರಹಾಕಿ ಎಂದ ಸಚಿವ ಗುಂಡೂರಾವ್! ಮಾಧ್ಯಮದೊಂದಿಗೆ ಮಾತನಾಡಿ ತನ್ನ ಅಳಲು ತೋಡಿಕೊಂಡ ಯುವಕ!

ಸುದ್ದಿಗೋಷ್ಠಿ ನಡೆಯುತ್ತಿರುವ ನಡುವೆಯೇ ತನ್ನ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಯುವಕನೋರ್ವನನ್ನು…

1 of 115