Gl harusha
ಸ್ಥಳೀಯ

ಅಧ್ಯಕ್ಷರಿಲ್ಲದೇ ಮುನ್ನಡೆಯುತ್ತಿರುವ ಕೃಷಿ ಕಾರ್ಮಿಕರ ಸಹಕಾರಿ ಸಂಘ! ಚುನಾವಣೆ ನಡೆಸದೇ, ಫೋರ್ಜರಿ ಸಹಿ ಹಾಕಿ ನಡೆಸಿದ ಮಹಾನಭೆ ವಿರುದ್ಧ ಸಹಕಾರ ಸಂಘಕ್ಕೆ ದೂರು!

ಕಳೆದ 2 ವರ್ಷಗಳಿಂದ ಅಧ್ಯಕ್ಷರೇ ಇಲ್ಲದಿರುವ ದ.ರ. ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಮಹಾಸಭೆಯನ್ನು ಸದಸ್ಯರಿಗೆ ನೋಟಿಸ್ ನೀಡದೇ, ಫೋರ್ಜರಿ ಸಹಿ ಹಾಕಿ ನಡೆಸಿರುವ ಬಗ್ಗೆ ಮೈಸೂರು ಪ್ರಾಂತ್ಯದ ಸಹಕಾರ ಸಂಘಗಳ ಜಿಂಟಿನಿಬಂಧಕರಿಗೆ ಹಾಗೂ ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಳೆದ 2 ವರ್ಷಗಳಿಂದ ಅಧ್ಯಕ್ಷರೇ ಇಲ್ಲದಿರುವ ದ.ರ. ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಮಹಾಸಭೆಯನ್ನು ಸದಸ್ಯರಿಗೆ ನೋಟಿಸ್ ನೀಡದೇ, ಫೋರ್ಜರಿ ಸಹಿ ಹಾಕಿ ನಡೆಸಿರುವ ಬಗ್ಗೆ ಮೈಸೂರು ಪ್ರಾಂತ್ಯದ ಸಹಕಾರ ಸಂಘಗಳ ಜಿಂಟಿನಿಬಂಧಕರಿಗೆ ಹಾಗೂ ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಲಾಗಿದೆ.

srk ladders
Pashupathi
Muliya

ಆರ್ಯಾವು ಗ್ರಾಮದ ಮೇಗಿನವಂಜ ನಿವಾಸಿ ಮಹಾವೀರ ಜೈನ್ ಎಂಬವರು ದೂರು ನೀಡಿದ್ದು, ಇವರು ಈ ಸಂಘದಲ್ಲಿ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿರುತ್ತೇನೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ. 2020ರಲ್ಲಿ ಸಂಘದ ಆಡಳಿತ ಮಂಡಳಿಗೆ ಅಯ್ಕೆಯಾಗಿದ್ದು, ನಂತರ ತನ್ನ ಫೋರ್ಜರಿ ಸಹಿ ಹಾಕಿ, ರಾಜೀನಾಮೆ ಪತ್ರ ಸಿದ್ಧವಡಿಸಿದ್ದಾರೆ. ಈ ರಾಜೀನಾಮೆ ಪತ್ರವನ್ನು ತನ್ನ ಒಪ್ಪಿಗೆ ಇಲ್ಲದೇ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ದಶ ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ಅವಧಿ ಮುಗಿದಿದ್ದು ಸಂಘದ ಅಧ್ಯಕ್ಷರಾಗಿದ್ದ ಸುಮತಿ ಎನ್ ಹೆಗ್ಡೆ ಅವರು 2 ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿರುತ್ತಾರೆ. ನಂತರ ಸಂಘದ ಅಧ್ಯಕ್ಷತೆಗೆ ಬದಲಿ ವ್ಯವಸ್ಥೆಯನ್ನೇ ಮಾಡಿರುವುದಿಲ್ಲ. ಮಾತ್ರವಲ್ಲ ಪೋರ್ಜರಿ ಸಹಿಯನ್ನು ಹಾಕಿ. ಮಹಾಸಭೆಯನ್ನು ನಡೆಸಲಾಗಿದೆ. ಈ ಮಹಾಸಭೆಯ ಬಗ್ಗೆ ಸಂಘದ ಸದಸ್ಯರಿಗೆ ಯಾವುದೇ ನೋಟಿಸನ್ನು ನೀಡಿರುವುದಿಲ್ಲ ಎಂದು ದೂರಿದ್ದಾರೆ.

ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ, ಹೊಸ ಆಡಳಿತ ಮಂಡಳಿ ರೂಪಿಸಲು ಚುನಾವಣೆ ನಡೆಸುವಂತೆ ಆದೇಶ ನೀಡುವಂತೆ ಮಹಾವೀರ ಜೈನ್ ಹೇಳಿಕೊಂಡಿದ್ದಾರೆ


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ|  ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಶಾಸಕ ಅಶೋಕ್ ರೈ ಚರ್ಚೆ

ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದು ಇದಕ್ಕೆ ಸಂಬಂಧಿಸಿದಂತೆ ವಿವಿಧ ಹಂತದ ಕೆಲಸ…