Gl jewellers
ಸ್ಥಳೀಯ

ಕಬಕ – ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಫೀಡಿಂಗ್ ರೂಮ್, ಶಿಶುಪಾಲನಾ ಕೇಂದ್ರ ಉದ್ಘಾಟನೆ|ರೋಟರಿ ಕ್ಲಬ್ ಪುತ್ತೂರು ಯುವದ ಕೊಡುಗೆ

ರೋಟರಿ ಕ್ಲಬ್ ಪುತ್ತೂರು ಯುವದ ವತಿಯಿಂದ ಕಬಕ - ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಎದೆಹಾಲು ಕುಡಿಯುವ ಕೇಂದ್ರ ಹಾಗೂ ಶಿಶುಪಾಲನಾ ಘಟಕವನ್ನು ಗುರುವಾರ ಉದ್ಘಾಟಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದ ವತಿಯಿಂದ ಕಬಕ – ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಎದೆಹಾಲು ಕುಡಿಯುವ ಕೇಂದ್ರ ಹಾಗೂ ಶಿಶುಪಾಲನಾ ಘಟಕವನ್ನು ಗುರುವಾರ ಉದ್ಘಾಟಿಸಲಾಯಿತು.

Pashupathi
Papemajalu garady
Karnapady garady

ರೋಟರಿ ಗವರ್ನರ್ ಭೇಟಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ತಾಯಿ ಶ್ರೇಯಸ್ವಿ ಎಸ್.ಆರ್. ಹಾಗೂ ಮಗು ಇಶಾ ಲಕ್ಷ್ಮೀ ಫೀಡಿಂಗ್ ರೂಮನ್ನು ಉದ್ಘಾಟಿಸಿದರು.

ರೋಟರಿ ಗವರ್ನರ್ ವಿಕ್ರಂ ದತ್ತ ಮಾತನಾಡಿ, ಜಿಲ್ಲೆಯಲ್ಲಿ ರೋಟರಿ ಕೊಡುಗೆಯಾಗಿ ನೀಡುತ್ತಿರುವ ಎರಡನೇ ಘಟಕ ಇದು. ಅತೀ ಅವಶ್ಯವಾದ ಈ ಘಟಕ ನೀಡಿದ ಕ್ಲಬ್ಬಿಗೆ ಜಿಲ್ಲಾ ರೋಟರಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ರೋಟರಿಯ ಏಳು ಫೋಕಸ್ ಏರಿಯಾದಲ್ಲಿ ಒಂದಾದ ಫೀಡಿಂಗ್ ರೂಮ್, ರೈಲ್ವೇ ನಿಲ್ದಾಣದಲ್ಲಿ ಅಗತ್ಯವಾಗಿದೆ ಎಂದರು.

ಕ್ಲಬ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ, ತಾಯಿ ಹಾಲು ಅಮೃತ. ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿ ಹಾಲು ಅತೀ ಅವಶ್ಯ. ಈ ಹಿನ್ನೆಲೆಯಲ್ಲಿ ಎದೆ ಹಾಲು ನೀಡುವ ಹಾಗೂ ಶಿಶು ಪಾಲನಾ ಕೇಂದ್ರವನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ. ರೈಲ್ವೇ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.

ರೈಲ್ವೇ ಮುಖ್ಯ ಟಿಕೇಟ್ ನಿರೀಕ್ಷಕ ವಿಠಲ್ ನಾಯಕ್ ಮಾತನಾಡಿ, ರೈಲ್ವೇ ಪ್ರಯಾಣಿಕರಿಗೆ ಈ ಫೀಡಿಂಗ್ ರೂಂ ಉಪಯುಕ್ತ. ಇಂದು ರೈಲ್ವೇಯ ಎಸಿ ಕೋಚ್ ನಲ್ಲಿ ಫೀಡಿಂಗ್ ರೂಂ ಇದೆ. ರೋಟರಿಯ ಎಲ್ಲರಿಗೂ ದನ್ಯವಾದ ಎಂದರು.

ಸ್ಟೇಷನ್ ಮಾಸ್ಟರ್ ಸ್ವತಂತ್ರ ಮಿಶ್ರಾ, ಸಂಕೇತ ಕಚೇರಿಯ
ಭಾವೇಶ್ ಕುಮಾರ್ ಭಾರತೀ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಕಾರ್ಯದರ್ಶಿ ವಚನಾ ಜಯರಾಂ, ಕೋಶಾಧಿಕಾರಿ ಅಭೀಷ್, ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್ ರೈ ಮಾಡಾವು, ಝೋನಲ್ ಲೆಫ್ಟಿನೆಂಟ್ ಪೀಟರ್ ವಿಲ್ಸನ್ ಪ್ರಭಾಕರ್, ಪೂರ್ವಾಧ್ಯಕ್ಷ ಪಶುಪತಿ ಶರ್ಮಾ, ನಿಯೋಜಿತ ಅಧ್ಯಕ್ಷ ಕುಸುಮಾರಾಜ್, ಸ್ಥಾಪಕಾಧ್ಯಕ್ಷ ರತ್ನಾಕರ್ ರೈ, arch klump society ಸದಸ್ಯ ವಿಶ್ವಾಸ್ ಶೆಣೈ, ಪೂರ್ವಾಧ್ಯಕ್ಷರಾದ ಚೇತನ್, ಉಮೇಶ್ ನಾಯಕ್ ಪುತ್ತೂರು, ನರಸಿಂಹ ಪೈ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಪುತ್ತೂರು ಪೇಟೆಯಲ್ಲಿ ನಂದಿ ರಥಯಾತ್ರೆ | ದೇಶಿ ನಂದಿಗೆ ಹಾರಾರ್ಪಣೆ, ಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಚನೆ

ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌,…

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ