Gl jewellers
ದೇಶ

ಮಧ್ಯಮ ವರ್ಗ ಕೇಂದ್ರೀಕರಿಸಿ ಬಜೆಟ್ ಮಂಡಿಸಿತೇ ಕೇಂದ್ರ ಸರ್ಕಾರ!! ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಹೈಲೈಟ್ಸ್ ಇಲ್ಲಿದೆ…

Karpady sri subhramanya
ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನ ಪ್ರಮುಖ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ನವದೆಹಲಿ: ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡನೆ ಮಾಡಿದ್ದಾರೆ.

ಈ ಬಾರಿ ಕೇಂದ್ರವು ಕೃಷಿ, ರೈತರು ಮತ್ತು MSME ಗಳ ಮೇಲೆ ಕೇಂದ್ರೀಕರಿಸಿರುವಂತೆ ತೋರುತ್ತದೆ. ಅಲ್ಲದೆ, ಮಧ್ಯಮ ವರ್ಗದ ವೇತನದಾರರಿಗೆ ದೊಡ್ಡ ಪರಿಹಾರವಾಗಿ ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

Sampya jathre

ಇಂದು ಮಂಡಿಸಲಾದ ಬಜೆಟ್‌ನ ಹೈಲೈಟ್ಸ್

*ಕ್ಲೀನ್‌ಟೆಕ್ ಮಿಷನ್ ಅಡಿಯಲ್ಲಿ ಸೌರಶಕ್ತಿ, ವಿದ್ಯುತ್‌ ಚಾಲಿತ ವಾಹನ ಮತ್ತು ಬ್ಯಾಟರಿ ಕೈಗಾರಿಕೆಗಳ ಪ್ರಚಾರ

* ಕೈಗಾರಿಕೆಗಳನ್ನು ಉತ್ತೇಜಿಸಲು ರಾಷ್ಟ್ರೀಯ ಉತ್ಪಾದನಾ ಮಿಷನ್

* ನಗರ ಬಡವರಿಗೆ 30 ಸಾವಿರ ರೂ. ಮಿತಿಯೊಂದಿಗೆ ಯುಪಿಐ ಲಿಂಕ್ಸ್‌ ಕ್ರೆಡಿಟ್ ಕಾರ್ಡ್‌ಗಳು

* ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ 75 ಸಾವಿರ ಹೊಸ ವೈದ್ಯಕೀಯ ಸೀಟುಗಳು

* ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳು

*ಸುಧಾರಣೆಗಳನ್ನು ಉತ್ತೇಜಿಸಲು ರಾಜ್ಯಗಳಿಗೆ 5 ವರ್ಷಗಳ ಕಾಲ ಬಡ್ಡಿರಹಿತ ಸಾಲಗಳು

* ಜಲ ಜೀವನ್ ಮಿಷನ್ ಅಡಿಯಲ್ಲಿ 15 ಕೋಟಿ ಜನರಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲಾಗಿದೆ

ಪ್ರತಿ ಮನೆಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ಹೆಚ್ಚಿನ ಹಣ ಒದಗಿಸುವುದು

* ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಒಪ್ಪಂದಗಳ ಮೂಲಕ 100 ಪ್ರತಿಶತ ಶುದ್ಧ ನೀರಿನ ನಲ್ಲಿಗಳು ಒದಗಿಸುವುದು

* ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯಡಿ ಗಿಗ್ ಕಾರ್ಮಿಕರಿಗೆ ಆರೋಗ್ಯ ಕಾರ್ಡ್‌ಗಳು

* ದೇಶಾದ್ಯಂತ 50 ಸಾವಿರ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪನೆ

*ದ್ವಿದಳ ಧಾನ್ಯಗಳ ಉತ್ಪಾದನೆಗೆ ಸ್ವಾವಲಂಬನೆ ಯೋಜನೆ

*ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆ

* ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಗೆ ಹೊಸ ಯೋಜನೆ

* ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷದಿಂದ 5 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ಇದು 7.7 ಕೋಟಿ ರೈತರಿಗೆ ಅನುಕೂಲವಾಗಲಿದೆ.

* ಪ್ರಧಾನ ಮಂತ್ರಿ ಧನ್ ಧಾನ್ಯ ಯೋಜನೆ ಕಾರ್ಯಕ್ರಮ ಘೋಷಣೆ

* ಎಂಎಸ್‌ಎಂಇಗಳಿಗೆ ಸಾಲಗಳು 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಏರಿಕೆ

* ನವೋದ್ಯಮಗಳಿಗೆ ನೀಡುವ ಸಾಲ 10 ಕೋಟಿ ರೂ.ಗಳಿಂದ 20

ಕೋಟಿ ರೂ.ಗಳಿಗೆ ಏರಿಕೆ 40+

* ಆಟಿಕೆ ತಯಾರಿಕೆಗೆ ವಿಶೇಷ ಯೋಜನೆ

* ಹೆಚ್ಚಿನ ಇಳುವರಿ ನೀಡುವ ಪ್ರಭೇದಗಳಿಗೆ ವಿಶೇಷ ರಾಷ್ಟ್ರೀಯ ಮಿಷನ್

* 2024ರ ಜುಲೈನಿಂದ 100ಕ್ಕೂ ಹೆಚ್ಚು ಹೆಚ್ಚಿನ ಇಳುವರಿ ನೀಡುವ ಪ್ರಭೇದಗಳ ಬಿಡುಗಡೆ

* 50 ವರ್ಷಗಳವರೆಗೆ ಬಡ್ಡಿರಹಿತ ಸಾಲಗಳು

*ಸುಧಾರಣೆಗಳನ್ನು ಜಾರಿಗೆ ತಂದರೆ ಪ್ರೋತ್ಸಾಹಧನ

*ಗಿಗ್ ಕಾರ್ಮಿಕರಿಗೆ ಗುರುತಿನ ಚೀಟಿಗಳು

* ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ ನೋಂದಣಿ

* ಪಿಎಂ ಜನ ಆರೋಗ್ಯ ಯೋಜನೆಯಡಿಯಲ್ಲಿ ಒಂದು ಕೋಟಿ ಗಿಗ್ ಕೆಲಸಗಾರರಿಗೆ ಆರೋಗ್ಯ ವಿಮೆ

* ರಪ್ತಿನಲ್ಲಿ MSMEಗಳು ಶೇಕಡಾ 45 ರಷ್ಟು ಕೊಡುಗೆ ನೀಡಲಿವೆ

* ಮುಂದಿನ ಐದು ವರ್ಷಗಳಲ್ಲಿ MSMEಗಳಿಗೆ ರೂ. 1.5 ಲಕ್ಷ ಕೋಟಿ ರೂ.ಸಾಲ

* 27 ವಲಯಗಳಲ್ಲಿನ ನವೋದ್ಯಮಗಳಿಗೆ ಸಾಲಕ್ಕಾಗಿ ವಿಶೇಷ ಕ್ರಮ

* ನೋಂದಾಯಿತ ಸೂಕ್ಷ್ಮ ಉದ್ಯಮಗಳಿಗೆ ರೂ.5 ಲಕ್ಷದವರೆಗಿನ ಕ್ರೆಡಿಟ್ ಕಾರ್ಡ್

27 ವಲಯಗಳಲ್ಲಿನ ನವೋದ್ಯಮಗಳಿಗೆ ಸಾಲಕ್ಕಾಗಿ ವಿಶೇಷ ಕ್ರಮ

* ನೋಂದಾಯಿತ ಸೂಕ್ಷ್ಮ ಉದ್ಯಮಗಳಿಗೆ ರೂ.5 ಲಕ್ಷದವರೆಗಿನ ಕ್ರೆಡಿಟ್ ಕಾರ್ಡ್

* ಮೊದಲ ವರ್ಷದಲ್ಲಿ ಸೂಕ್ಷ್ಮ ಉದ್ಯಮಗಳಿಗೆ ರೂ.10 ಲಕ್ಷದವರೆಗಿನ ಕ್ರೆಡಿಟ್‌ ಕಾರ್ಡ್‌ಗಳು

* ಹಿರಿಯ ನಾಗರಿಕರಿಗೆ TDS ವಿನಾಯಿತಿ ರೂ.50 ಸಾವಿರದಿಂದ ರೂ.1 ಲಕ್ಷಕ್ಕೆ ಏರಿಕೆ

* ಅಪ್‌ಡೇಟೆಡ್ ಆದಾಯ ತೆರಿಗೆ ನೋಂದಣಿಗೆ ನಾಲ್ಕು ವರ್ಷಗಳ ವಿಸ್ತರಣೆ

* ವಿಮಾ ವಲಯದಲ್ಲಿ ಶೇ. 100 ರಷ್ಟು FDI ಗೆ ಅವಕಾಶ


ಈ ಸುದ್ದಿಯನ್ನು ಶೇರ್ ಮಾಡಿ

Related Posts

ದಿ.ಜಯಲಲಿತಾಗೆ ಸೇರಿದ ಕೋಟ್ಯಾಂತರ ಬೆಲೆಯ ಆಸ್ತಿ, ಆಭರಣ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಬೆಂಗಳೂರು ಕೋರ್ಟ್ ಆದೇಶ

ಕೋಟ್ಯಾಂತರ ಬೆಲೆಯ ಆಸ್ತಿ, ಆಭರಣ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಬೆಂಗಳೂರು ಕೋರ್ಟ್…