ನವದೆಹಲಿ: ಶುಕ್ರವಾರ ಬೆಳಗ್ಗೆ ರಾಷ್ಟ್ರ ರಾಜಧಾನಿ
ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, ನಗರವು ಶೀತ ಅಲೆಯಿಂದ ಕಂಗೆಟ್ಟಿದೆ. ದೆಹಲಿಯಲ್ಲಿ ಬೆಳಗ್ಗೆ 5:30 ಕ್ಕೆ ತಾಪಮಾನವು 9.6 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ವರದಿ ಮಾಡಿದೆ.
ಈಗಾಗಲೇ ದೆಹಲಿ ಮತ್ತು ಸುತ್ತಮುತ್ತ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (AQI) ಬೆಳಗ್ಗೆ 6 ಗಂಟೆಗೆ 348 ಕ್ಕೆ ದಾಖಲಾಗಿದ್ದು, ಅದನ್ನು ‘ಅತ್ಯಂತ ಕಳಪೆ’ ವಿಭಾಗದಲ್ಲಿ ಇರಿಸಿದೆ.
301 ಮತ್ತು 400 ರ ನಡುವಿನ ಎಕ್ಯುಐಯನ್ನು ‘ಅತ್ಯಂತ ಕಳಪೆ’ ಎಂದು ವರ್ಗೀಕರಿಸಲಾಗಿದೆ, ಆದರೆ 401 ಮತ್ತು 500 ನಡುವಿನ ಮಟ್ಟವನ್ನು ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.
ತಾಪಮಾನದ ಕುಸಿತದೊಂದಿಗೆ, ದೆಹಲಿ ಅರ್ಬನ್ ಶೆಲ್ವರ್ ಇಂಪ್ಯೂವ್ಮೆಂಟ್ ಬೋರ್ಡ್ (DUSIB) ನಿರಾಶ್ರಿತರಿಗೆ ವಸತಿ ಕಲ್ಪಿಸಲು 235 ಪಗೋಡಾ ಟೆಂಟ್ಗಳನ್ನು ಸ್ಥಾಪಿಸಿದೆ. ಏಮ್ಸ್ ಲೋಧಿ ರಸ್ತೆ ನಿಜಾಮುದ್ದೀನ್ ಮೇಲ್ಲೇತುವೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ರಾತ್ರಿ ಶೆಲ್ಡರ್ಗಳನ್ನು ಸ್ಥಾಪಿಸಲಾಗಿದೆ.
ನಿವಾಸಿಗಳು ದೀಪೋತ್ಸವದ ಸುತ್ತಲೂ ಚಳಿಯನ್ನು ಎದುರಿಸಿದರು, ಇತರರು ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಈ ಸೌಲಭ್ಯಗಳಲ್ಲಿ ಆಶ್ರಯ ಪಡೆದರು.
ದಟ್ಟವಾದ ಮಂಜು ದೆಹಲಿ ವಿಮಾನ ಕಾರ್ಯಾಚರಣೆಗೆ ಅಡ್ಡಿಪಡಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳು ಹಾಗೂ 22 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯು ದಟ್ಟವಾದ ಮಂಜಿನಿಂದಾಗಿ ಕಡಿಮೆ ಗೋಚರತೆಯನ್ನು ಕಂಡಿತು.
ನಿನ್ನೆ ಕೂಡ ದಟ್ಟವಾದ ಮಂಜು ಆವರಿಸಿದ್ದರಿಂದ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರಾಟ ನಡೆಸಬೇಕಿದ್ದ 134 ವಿಮಾನಗಳು ಹಾಗೂ 22 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.