Gl
ಕರಾವಳಿ

ಕಡಬ: ಸೇತುವೆ ಅಧಿಕೃತ ಉದ್ಘಾಟನೆಗೆ ಮುನ್ನವೇ ಲಕ್ಷ ರೂ ಮೌಲ್ಯದ ಸೋಲಾರ್ ದೀಪಗಳನ್ನು ಕದ್ದೊಯ್ದ ಕಳ್ಳರು

ಎಡಮಂಗಲ-ಕಡಬವನ್ನು ಸಂಪರ್ಕಿಸುವ ಪ್ರಮುಖ ಸೇತುವೆಯಾಗಿರುವ ಪಿಜಕ್ಕಳದ ಪಾಲೋಳಿ ಸೇತುವೆಯಲ್ಲಿ ಅಳವಡಿಸಿರುವ ಲಕ್ಷ ರೂ ಬೆಲೆಬಾಳುವ ದಾರಿದೀಪಗಳನ್ನು ಕಳ್ಳರು ಕದ್ದೊಯ್ದ ಘಟನೆ ಡಿ.10 ರಾತ್ರಿ ನಡೆದಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಕಡಬ : ಎಡಮಂಗಲ-ಕಡಬವನ್ನು ಸಂಪರ್ಕಿಸುವ ಪ್ರಮುಖ ಸೇತುವೆಯಾಗಿರುವ ಪಿಜಕ್ಕಳದ ಪಾಲೋಳಿ ಸೇತುವೆಯಲ್ಲಿ ಅಳವಡಿಸಿರುವ ಲಕ್ಷ ರೂ ಬೆಲೆಬಾಳುವ ದಾರಿದೀಪಗಳನ್ನು ಕಳ್ಳರು ಕದ್ದೊಯ್ದ ಘಟನೆ ಡಿ.10 ರಾತ್ರಿ ನಡೆದಿದೆ

Pashupathi

ಇತ್ತೀಚೆಗೆ ಸುಳ್ಯ ಶಾಸಕಿ ಮುಂದಾಳತ್ವದಲ್ಲಿ ಸೇತುವೆಯನ್ನು ತಾತ್ಕಾಲಿಕವಾಗಿ ಉದ್ಘಾಟಿಸಿದ ಬಳಿಕ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಧಿಕವಾಗಿದೆ. ಈ ಸೇತುವೆ ನಿರ್ಮಾಣದ ನಂತರ ಲೋಕೋಪಯೋಗಿ ಇಲಾಖೆಯು ಸೋಲಾರ್ ಬೀದಿ ದೀಪಗಳನ್ನು ಕೂಡ ಅಳವಡಿಸಲಾಗಿತ್ತು. ಇದೀಗ ಎರಡು ಸೋಲಾರ್ ದೀಪಗಳನ್ನು ಕಳ್ಳರು ಎಗರಿಸಿದ್ದಾರೆ.

akshaya college

ಈ ನೂತನ ಸೇತುವೆ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಸಹಿತ ಕಳ್ಳಸಾಗಣೆಯಂತಹ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಉಳಿದ ದಾರಿ ದೀಪಗಳು ಕಳ್ಳರ ಪಾಲಾಗಲಿದ್ದು ಸ್ಥಳೀಯಾಡಳಿತ ಮತ್ತು ಪೊಲೀಸರು ಕ್ರಮ ಕೈಗೊಳ್ಳುವಂತೆ ಆ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.

ಸುಳ್ಯ-ಕಡಬ ಉಭಯ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಈ ಪ್ರದೇಶಕ್ಕೆ ಪೊಲೀಸರು ಗಸ್ತು ತಿರುಗಬೇಕು ಜೊತೆಗೆ ಸೇತುವೆ ಬಳಿ ಸಿಸಿಟಿವಿ ಅಳವಡಿಸಬೇಕಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…

ಮಂಗಳೂರು ಕಮೀಷನರ್, ಎಸ್ಪಿ ಅವರಿಂದ ಶ್ಲಾಘನೀಯ ಕೆಲಸ!  ಶಾಂತಿ ಸ್ಥಾಪನೆಗೆ ಗಡಿಪಾರು ಉತ್ತಮ ಕಾರ್ಯ: ಕಾಂಗ್ರೆಸ್

ಪುತ್ತೂರು: ಕೋಮು ಭಾವನೆ ಕೆರಳಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು ಮಂಗಳೂರು…

ಮಂಗಳೂರು ಪೊಲೀಸ್‌ ಕಮಿಷನ‌ರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರ | ಕಾನೂನು ಎಲ್ಲರಿಗೂ ಒಂದೇ: ಸುಧೀರ್ ಕುಮಾರ್ ರೆಡ್ಡಿ

ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕೋಮು ದ್ವೇಷದ ದಳ್ಳುರಿಗೆ ತುತ್ತಾಗಿರುವ ಮಂಗಳೂರಿಗೆ…