ಮಂಗಳೂರು: ಸಿಐಎಸ್ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ತಂಡವು ಕರಾವಳಿ ಸಂಪರ್ಕ ಮತ್ತು ಜಾಗೃತಿ ಭಾಗವಾಗಿ ಪಣಂಬೂರು ಬೀಚ್ಗೆ ಬುಧವಾರ ಆಗಮಿಸಿತು.ಜನವರಿ 28 ರಂದು ಗುಜರಾತ್ನಿಂದ ಪ್ರಾರಂಭಗೊಂಡ ಈ ಸೈಕ್ಲೋಥಾನ್ ನಗರಕ್ಕೆ ಆಗಮಿಸಿದಾಗ ಸಂಭ್ರಮದಿಂದ ಸ್ವಾಗತಿಸಲಾಯಿತು.


ಗುರುವಾರ ಬೆಳಿಗ್ಗೆ ಸೈಕ್ಲೋಥಾನ್ಗೆ ಪಣಂಬೂರು ಬೀಚ್ನಿಂದ ಚಾಲನೆ ನೀಡಲಾಯಿತು. ಸೈಕ್ಲಿಂಗ್ ತಂಡವು ಪ್ರಯಾಣದ ಮುಂದಿನ ಹಂತಕ್ಕಾಗಿ ಕೊಚ್ಚಿನ್ ಕಡೆಗೆ ಸಾಗಿತು. ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ಕರಾವಳಿ ಪ್ರದೇಶಗಳಲ್ಲಿ ರಾಷ್ಟ್ರೀಯ ಏಕತೆ, ಫಿಟ್ನೆಸ್ ಜಾಗೃತಿ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ಈ ಕಾರ್ಯಕ್ರಮದಲ್ಲಿ ಎಡಿಜಿ (ಉತ್ತರ) ಸುಧೀರ್ ಕುಮಾರ್, ಐಜಿ ಸೋನಿಯಾ ನಾರಂಗ್ ಐಪಿಎಸ್ ಮತ್ತು ಸಿಐಎಸ್ಎಫ್ನ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು





















