ಕೊಯನಾಡು ಕೆಎಸ್ ಆರ್ ಟಿಸಿ ಬಸ್ ಡ್ರೈವರೊಬ್ಬ ಪ್ರಯಾಣಿಕರು ಬಸ್ ನಿಂದ ಇಳಿಯಲು ಕೇಳಿಕೊಂಡರೆ ಬಸ್ ಡೋರ್ ತೆಗೆಯದೇ ಸತಾಯಿಸುತ್ತಿರುವ ಕುರಿತು ಸಾರ್ವಜನಿಕರಿಂದ ಡಿಪ್ಪೋ ಮ್ಯಾನೇಜರ್ ಗೆ ದೂರು ನೀಡಿದ್ದು, ವಿಚಾರಣೆ ನಡೆಸಿದ ಅಧಿಕಾರಿಗಳು ಆ ಡ್ರೈವರ್ ರೂಟ್ ಬದಲಾವಣೆ ಮಾಡಿರುವುದಾಗಿ ತಿಳಿದು ಬಂದಿದೆ.
ಸುಳ್ಯ – ಕೊಯನಾಡು ಬಸ್ ನ ಗಫೂರ್ ಎಂಬ ಚಾಲಕನ ರೂಟ್ ಬದಲಾವಣೆ ಮಾಡಲಾಗಿದೆ. ಅವರ ಬಗ್ಗೆ ಪ್ರಯಾಣಿಕರು ನಿಂತಿದ್ದಲ್ಲಿ ಬಸ್ ನಿಲ್ಲಿಸುವುದಿಲ್ಲ. ಬಸ್ ನಿಂದ ಇಳಿಯಲು ಪ್ರಯಾಣಿಕರು ಸಿದ್ಧರಾದಾಗ ಬಸ್ ನ ಡೋರ್ ತೆಗೆಯುವುದಿಲ್ಲ ಎಂಬಿತ್ಯಾದಿ ದೂರುಗಳು ಡಿಪ್ಪೋ ಮ್ಯಾನೇಜರ್ ಗೆ ಬಂದಿದ್ದವು. ಅ.26ರಂದು ಬೆಳಗ್ಗೆ ಕೊಯನಾಡಿನಿಂದ ಸುಳ್ಯಕ್ಕೆ ಬಸ್ ಬರುತ್ತಿರುವಾಗ ಡೋರ್ ತೆಗೆಯದ ವಿಚಾರಕ್ಕೆ ಪ್ರಯಾಣಿಕರೊಂದಿಗೆ ಬಸ್ ನಲ್ಲೇ ವಾಗ್ವಾದ ನಡೆಯಿತೆನ್ನಲಾಗಿದೆ.
ಬಸ್ ನಲ್ಲಿದ್ದ ಪ್ರಯಾಣಿಕರು ಪುತ್ತೂರು ಅಧಿಕಾರಿಗಳಿಗೆ, ಸುಳ್ಯ ಡಿಪ್ಪೋ ಮ್ಯಾನೇಜರ್ ರಿಗೆ ದೂರು ನೀಡಿದ್ದರು. ಈ ಹಿಂದೆ ಡ್ರೈವರ್ ಕಲ್ಲುಗುಂಡಿಯ ಗಫೂರ್ ಮೇಲೆ ಬಂದ ದೂರು ಹಾಗೂ ಅ.26ರಂದು ಪ್ರಯಾಣಿಕರು ದೂರಿಕೊಂಡಿರುವ ಮೇರೆಗೆ ಸುಳ್ಯ -ಕೊಯನಾಡು ರೂಟ್ ನಿಂದ ಡ್ರೈವರ್ ಗಫೂರ್ ರನ್ನು ಬದಲಾಯಿಸಿದ್ದಾರೆಂದು ತಿಳಿದು ಬಂದಿದೆ.























