ಪುತ್ತೂರು:ನಾಗಮಂಗಲದ ಗೋಶಾಲೆಯೊಂದಕ್ಕೆ ಕೊಂಡೊಯ್ಯಲೆಂದು ಆರ್ಲಪದವು ಬಳಿ ಜಾನುವಾರುಗಳನ್ನು ಲಾರಿಗೆ ತುಂಬಿಸುತ್ತಿದ್ದ ವೇಳೆ ಅನುಮಾನಗೊಂಡು ಜಮಾಯಿಸಿದ ಹಿಂದು ಸಂಘಟನೆ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಸಂಪ್ಯ ಠಾಣೆಯ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದರು. ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳಿದ್ದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.ಬೆಳ್ತಂಗಡಿ ತಾಲೂಕಿನ ಉಜಿರೆ ಗೋಶಾಲೆ, ಕೇರಳದ ಪೆರ್ಲ ಸಮೀಪದ ಬಜಕೂಡ್ಲುವಿನ ಗೋಶಾಲೆಯಿಂದ ಮಲೆನಾಡು ಗಿಡ್ಡ ತಳಿಯ ಜಾನುವಾರುಗಳನ್ನು ನಾಗಮಂಗಲದ ಶ್ರೀಲಕ್ಷ್ಮೀ ಗೋಶಾಲೆಗೆ ಸಾಗಾಟ ಮಾಡುವ ಕಾರ್ಯ ನಡೆಯುತ್ತಿತ್ತು.ಎರಡೂ ಗೋಶಾಲೆಗಳಿಂದ ಗೋವುಗಳನ್ನು ಪಾಣಾಜೆ ಗ್ರಾಮದ ಆರ್ಲಪದವಿಗೆ ತರಲಾಗಿತ್ತು.ಅಲ್ಲಿ ಜಾನುವಾರುಗಳನ್ನು ಲಾರಿಗೆ ತುಂಬಿಸುತ್ತಿದ್ದುದರಿಂದ ಅನುಮಾನಗೊಂಡು ಹಿಂದು ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಸಂಪ್ಯ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ ವೇಳೆ, ಎಲ್ಲಾ ಜಾನುವಾರುಗಳನ್ನು ನಾಗಮಂಗಲದ ಗೋಶಾಲೆಗೆ ಕೊಂಡೊಯ್ಯುತ್ತಿರುವ ಕುರಿತು ಅಧಿಕೃತ ದಾಖಲೆಗಳು ಸಾಗಾಟಗಾರರಲ್ಲಿ ಇರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಅನುಮಾನಕ್ಕೆ ಎಡೆ ನೀಡಿದ ಗೋ ಸಾಗಾಟ!ಪ್ರಕರಣಕ್ಕೆ ತೆರೆ ಎಳೆದ ಸಂಪ್ಯ ಪೊಲೀಸರು!
Related Posts
ವಿಮಾನದ ಎಮೆರ್ಜೆನ್ಸಿ ವಿಂಡೋದಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕ!
ಅಹಮದಾಬಾದ್: ಏರ್ ಇಂಡಿಯಾ ವಿಮಾನ AI 171 ಇಂದು ಗುಜರಾತ್ನ ಅಹಮದಾಬಾದ್ನಲ್ಲಿ ಟೇಕ್ ಆಫ್ ಆದ…
ವಿಮಾನ ಪತನದಲ್ಲಿ ಗುಜರಾತ್ ಮಾಜಿ ಸಿಎಂ, ಸಹಪೈಲೆಟ್ ಮಂಗಳೂರಿನ ಕುಂದರ್ ವಿಧಿವಶ! ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡದಲ್ಲಿ ಮೇಲೆ ಬಿದ್ದ ವಿಮಾನ!
ಗುಜರಾತಿನ ಅಹಮದಾಬಾದ್ ನ ಮೇಘನಿ ನಗರದಲ್ಲಿ ಪತನಗೊಂಡ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್…
ಕೊಟ್ಟಿಯೂರು: ಭಾರೀ ಜನಸಂದಣಿ, 10 ನಿಮಿಷದ ಹಾದಿಗೆ 3.30 ತಾಸು!! ಮಗು ಸಾವು; ಹೊಳೆ ನೀರಲ್ಲಿ ಕೊಚ್ಚಿ ಹೋದ ತರುಣರು!!
ಕಣ್ಣೂರು: ಕೊಟ್ಟಿಯೂರಿನಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಂಚಾರ ದಟ್ಟಣೆ…
ಮಂಗಳೂರು ಮಾದರಿಯ ವಿಮಾನ ದುರಂತ|ಅಹಮದಾಬಾದ್: ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ?
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾದ ಪ್ರಯಾಣಿಕ ವಿಮಾನ ಬೋಯಿಂಗ್ 737…
ಜುಗಾರಿ ಅಡ್ಡೆಗೆ ದಾಳಿ: ವಿಟ್ಲ ಎಸ್.ಐ. ಅಮಾನತು!!
ವಿಟ್ಲ: ಜುಗಾರಿ ಆಡುವ ಸ್ಥಳಕ್ಕೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಟ್ಲ ಪೊಲೀಸ್ ಠಾಣಾ…
ಕಾಂತಾರ ಚಲನಚಿತ್ರದ ಮಿಮಿಕ್ರಿ ಕಲಾವಿದ ಹೃದಯಾಘಾತದಿಂದ ಮೃತ್ಯು.!!
ಕಾಂತಾರ ಚಲನಚಿತ್ರದ ಕಲಾವಿದನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ತೀರ್ಥಹಳ್ಳಿಯ ಆಗುಂಬೆ ಬಳಿ…
ಚಿಕ್ಕಪುತ್ತೂರು:7 ತಿಂಗಳ ಗರ್ಭಿಣಿ ರೇಷ್ಮ ಆತ್ಮಹತ್ಯೆ!!
ತುಂಬು ಗರ್ಭಿಣಿಯೊಬ್ಬರು ನೇಣು ಬಿಗಿದು ಜೀವಾಂತ್ಯ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಗರದ…
ದರ್ಬೆ: ಸ್ವಿಫ್ಟ್ – ಆಟೋ ನಡುವೆ ಅಪಘಾತ!
ಪುತ್ತೂರು: ದರ್ಬೆಯಲ್ಲಿ ಆಟೋ ಹಾಗೂ ಸ್ವಿಫ್ಟ್ ಕಾರ್ ನಡುವೆ ಅಪಘಾತ ನಡೆದ ಘಟನೆ ಸೋಮವಾರ ಸಂಜೆ…
ಕಡಬ: ವಿದ್ಯುತ್ ಶಾಕ್ ಹೊಡೆದು ಮಹಿಳೆ ಮೃತ್ಯು!!
ಪಂಪ್ ಸ್ವಿಚ್ ಹಾಕಲು ತೆರಳಿದ್ದ ಮಹಿಳೆಯೊಬ್ಬರಿಗೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಜೂ.…
ಪ್ರೀತಿಸಿ ಮದುವೆಯಾದ ಮಗಳನ್ನೇ ಕಿಡ್ನಾಪ್ ಮಾಡಿದ ಪೋಷಕರು..!!
ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಬಲವಂತವಾಗಿ ಪೋಷಕರು ಕೊಂಡೊಯ್ದ ಘಟನೆ…