ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಉಮರ್ ಫಾರೂಕ್ (48) ಎಂಬವರು ದಿನಾಂಕ 11.06.2025 ರಂದು ಬೆಳಿಗ್ಗೆ ಮನೆಯಿಂದ ಜೀಪ್ ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಾ, ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ, ದೂರುದಾರರು ತೆರಳುತ್ತಿದ್ದ ರಸ್ತೆಯ ವಿರುದ್ದ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದು, ಬೈಕ್ ನಲ್ಲಿದ್ದ ಹಿಂಬದಿ ಸವಾರನಾಗಿ ಕುಳಿತಿದ್ದ ವ್ಯಕ್ತಿಯು ತಲವಾರು ಬೀಸಿದ್ದಾನೆ. ಈ ವೇಳೆ ತಲವಾರು ತಾಗಿ ಉಮರ್ ಫಾರೂಕ್ ವಾಹನದ ಸೈಡ್ ಮಿರರ್ ಗಾಜು ಒಡೆದಿರುತ್ತದೆ.
ಈ ಬಗ್ಗೆ ದಿನಾಂಕ: 13.06.2025 ರಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ ಕ್ರ ~ : 68/2025 ៩០ : 109, 324(4), ರಂತೆ ಪ್ರಕರಣ ದಾಖಲಾಗಿದೆ.