pashupathi
ಪ್ರಚಲಿತ

ಕೋತಿ ಓಡಿಸಿದ ಮಹಿಳೆ, ರಿವೆಂಜ್ ತೀರಿಸಿದ ಮಂಗ!!

tv clinic
ಕಾಡಾನೆ, ಚಿರತೆಗಳಿಂದ ಕಂಗೆಟ್ಟ ಕಾಸರಗೋಡಿನ ಮುಳಿಯಾರು ಪರಿಸರದಲ್ಲೀಗ ಮಂಗನ ಹಾವಳಿಯೂ ಅತಿಯಾಗಿದೆ‌ . ಮನೆಯಂಗಳದ ತೆಂಗಿನಮರವೇರಿದ ಮಂಗಗಳು ಎಳನೀರು ಕುಡಿಯುವುದನ್ನು ಕಂಡ ಗೃಹಿಣಿ, ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಕಾಡಾನೆ, ಚಿರತೆಗಳಿಂದ ಕಂಗೆಟ್ಟ ಕಾಸರಗೋಡಿನ ಮುಳಿಯಾರು ಪರಿಸರದಲ್ಲೀಗ ಮಂಗನ ಹಾವಳಿಯೂ ಅತಿಯಾಗಿದೆ‌ . ಮನೆಯಂಗಳದ ತೆಂಗಿನಮರವೇರಿದ ಮಂಗಗಳು ಎಳನೀರು ಕುಡಿಯುವುದನ್ನು ಕಂಡ ಗೃಹಿಣಿ, ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು. ಈ ವೇಳೆ ಕೈಯ್ಯಲ್ಲಿದ್ದ ಎಳನೀರನ್ನು ಮಹಿಳೆಯತ್ತ ಮಂಗವೊಂದು ಎಸೆದಿದ್ದು, ಅದು ತಾಗಿ ಮಹಿಳೆಯ ಕೈಯ್ಯ ಮೂಳೆ ಮುರಿಯಿತು.

akshaya college

ಮುಳಿಯಾರು ಬಾವಿಕೆರೆಯ ಕೊಳತ್ತೂರಿನ ಕೃಷ್ಣನ್ ನಾಯ‌ರ್ ಎಂಬವರ ಪತ್ನಿ ಸಾವಿತ್ರಿ ಗಾಯಾಳಾಗಿದ್ದು, ಕಾಸರಗೋಡಿನ ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪ್ರದೇಶಗಳಲ್ಲಿ ಕಳೆದ ಕೆಲವು ಸಮಯಗಳಿಂದ ವನ್ಯಮೃಗ ಉಪಟಳ ವಿಪರೀತವಾಗಿದೆ. ಒಂದೆಡೆ ಪದೇ, ಪದೇ ಕಾಡಾನೆಗಳು ನಾಡಲ್ಲಿ ಕೃಷಿನಾಶಗೈದು, ಭಯಮೂಡಿಸಿದರೆ ಮತ್ತೊಂದೆಡೆ ಪದೇ, ಪದೇ ಕಾಣಿಸಿಕೊಳ್ಳುವ ಚಿರತೆಗಳೂ ಭೀತಿ ಹುಟ್ಟಿಸಿದೆ. ಇದರೊಂದಿಗೆ ಈಗ ಮಂಗಗಳೂ ಮನುಷ್ಯರ ಮೇಲೆ ಆಕ್ರಮಣ ಎಸಗುವ ಮಟ್ಟಕ್ಕೆ ಬಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಮುಳಿಯಾರು ಗ್ರಾ. ಪಂ. ವ್ಯಾಪ್ತಿಯ ವನ್ಯಮೃಗ ಹಾವಳಿ ವಿರುದ್ಧ ಅರಣ್ಯ ಇಲಾಖೆ ಕ್ರಮಕೈಗೊಂಡು, ನಾಗರಿಕರಿಗೆ ಭಯಮುಕ್ತ ಜೀವನ ಸೌಲಭ್ಯ ಒದಗಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ | ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪುತ್ತೂರಿನ ನ್ಯಾಯಾಧೀಶರು

ಪುತ್ತೂರು: ರಾಜೀ ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು…

ಅನಧಿಕೃತ ಶಾಲೆಗಳ ಸಂಖ್ಯೆ ಬಹಿರಂಗಪಡಿಸಿದ ಸರ್ಕಾರ: ಕಠಿಣ ಕ್ರಮದ ಸೂಚನೆ | ದ.ಕ., ಉಡುಪಿಯಲ್ಲೂ ಇದೆ ಅಕ್ರಮ ಶಾಲೆಗಳು!!

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆಯನ್ನು‌ ಸರಕಾರ ಬಹಿರಂಗಪಡಿ ಸಿದ್ದು, ಶಾಲಾ…