Browsing: thugudeep

ಆಪ್ತರ ಹೇಳಿಕೆಯಿಂದಲೇ ನಟ ದರ್ಶನ್ ಅರೆಸ್ಟ್ ಆಗಿದೆ. ಶನಿವಾರ (ಜೂನ್ 8) ಚಿತ್ರದುರ್ಗದಿಂದ ಬೆಳಿಗ್ಗೆ ರೇಣುಕಾ ಸ್ವಾಮಿಯನ್ನು ರಾಘವೇಂದ್ರ ಕರೆದುಕೊಂಡು ಬಂದಿದ್ದ. ಶನಿವಾರ 1 ಗಂಟೆಗೆ ಬೆಂಗಳೂರಿಗೆ ಬಂದಿರುವುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಬೆಂಗಳೂರಿಗೆ ಬಂದಿದ್ದ ರೇಣುಕಾ ಸ್ವಾಮಿಯನ್ನು ಮಧ್ಯಾಹ್ನ 2.30ಕ್ಕೆ ಶೆಡ್ಗೆ ಕರೆದುಕೊಂಡು ಹೋಗಿದ್ದರು. 3 ಗಂಟೆ ನಂತರ ದರ್ಶನ್ ಆ ಶೆಡ್ಡಿಗೆ ಎಂಟ್ರಿ ನೀಡಿದ್ದು ಗೊತ್ತಾಗಿದೆ. ದರ್ಶನ್ ಸಮ್ಮುಖದಲ್ಲೇ ಹಲ್ಲೆ ನಡೆದಿದೆ. ಶನಿವಾರ ರಾತ್ರಿ ಶವವನ್ನು ಆರೋಪಿಗಳು ಎಸೆದು ಹೋಗಿದ್ದರು ಎಂಬುವುದಕ್ಕೆ ಸಾಕ್ಷಿ ಲಭ್ಯವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read More