ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಿಡಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಟನ್ ಪೇಟ್ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ.
Author: shakthi
ಮಂಗಳೂರು-ಬೆಂಗಳೂರು ರೈಲ್ವೇ ಮಾರ್ಗದಲ್ಲಿ ಮಣ್ಣು ಜರಿದ ಹಿನ್ನಲೆ ಮಂಗಳೂರು-ಬೆಂಗಳೂರು ರೈಲು ಸಂಪರ್ಕ ಸ್ಥಗಿತಗೊಂಡಿದೆ.
ಬಲ್ನಾಡು ವಲಯದ ಉಜ್ರುಪಾದೆಯ ಎಸ್. ಪಾರ್ವತಿ ಭಟ್ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಾಶಾಸನ ಮಂಜೂರಾಗಿದ್ದು, ಮಂಜೂರಾತಿ ಪತ್ರ ಹಾಗೂ ಕೈಪಿಡಿಯನ್ನು ವಲಯದ ವಲಯಾಧ್ಯಕ್ಷ ಸತೀಶ್ ಒಳಗುಡ್ಡೆ ವಿತರಣೆ ಮಾಡಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಶೀಘ್ರ ಬಂಧಮುಕ್ತವಾಗಲೆಂದು ದರ್ಶನ್ ಪತ್ನಿ ಕೊಲ್ಲೂರು ಮೂಕಾಂಬಿಕೆ ಮೊರೆ ಹೋಗಿದ್ದಾರೆ,
ಕಾರು ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ.
ಜೈಲರ್ ಸಿನಿಮಾದ ಹಾಡಿಗೆ ಮೈ ಬಳುಕಿಸಿದ್ದ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ ಅವರು ಇದೀಗ ಮತ್ತೊಂದು ಮೈಲುಗಲ್ಲಿನತ್ತ ಹೆಜ್ಜೆ ಹಾಕಿದ್ದಾರೆ. ಆಗಸ್ಟ್ 15ರಂದು ತೆರೆ ಕಾಣಲಿರುವ “ಸ್ತ್ರೀ” ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ‘ಆಜ್…
ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಬೈಯ್ಯುವವರೇ ಹೆಚ್ಚು. ಆದರೆ ಇದೀಗ ಆತ್ಮಹತ್ಯೆಗೆ ಯಂತ್ರವನ್ನೇ ಆವಿಷ್ಕರಿಸಲಾಗಿದೆ. ಹೌದು, ಸ್ವಿಟ್ಜರ್ಲೆಂಡ್ ಇಂತಹ ಯಂತ್ರವೊಂದನ್ನು ಆವಿಷ್ಕರಿಸಿದೆ. ಈ ಯಂತ್ರದ ಸಹಾಯದಿಂದ ಒಂದೇ ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದಂತೆ. ಶೀಘ್ರದಲ್ಲೇ ಇದು ಮಾರುಕಟ್ಟೆಗೆ ಬರುವ ಸಾಧ್ಯತೆ…
6 ತಿಂಗಳು ಯುದ್ಧದಲ್ಲಿ ಭಾಗಿ, 21 ತಿಂಗಳು ವೈದ್ಯಕೀಯ ಉಪಚಾರ. ಒಟ್ಟು 27 ತಿಂಗಳು ಸೇನೆಯಲ್ಲಿ ನನ್ನ ಸೇವೆ. ಎಲ್ಲರೂ ಇದನ್ನು ದುರದೃಷ್ಟ ಅಂತ ಹೇಳ್ತಾರೆ. ಪರ್ಮನೆಂಟ್ ಕಮೀಷನ್ ಆಯ್ಕೆ ಮಾಡಿಕೊಂಡ ನಾನು, ಕೆಲವು ತಿಂಗಳುಗಳಷ್ಟೇ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಕಿತು ಎನ್ನುವುದು ಅವರ ವಾದ. ಆದರೆ ನನಗೆ ಹಾಗೇ ಅನ್ನಿಸಲೇ ಇಲ್ಲ. ಕಾರಣವೂ ಇದೆ. 1970ರ ಯುದ್ಧದ ಬಳಿಕ ಮತ್ತೊಂದು ಯುದ್ಧ ನಡೆದದ್ದು 1999ರಲ್ಲಿ. ಅದು ಕಾರ್ಗಿಲ್ ಯುದ್ಧ. ಇದೇ ಹೊತ್ತಿಗೆ ನಾನು ಸೇನೆಗೆ ಸೇರಿಕೊಂಡೆ. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ನನ್ನದಾಯಿತು. ಎಂತಾ ಅದೃಷ್ಟ ನೋಡಿ.
1999 ರ ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು 60 ದಿನಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ಅಭೂತಪೂರ್ವ ವಿಜಯವನ್ನು ಸಾಧಿಸಿತ್ತು. ಇದೀಗ 1999 ಜೂನ್ 24 ರಂದು ಭಾರತೀಯ ವಾಯಪಡೆ ಟೈಗರ್ ಹಿಲ್ ಮೇಲಿದ್ದ ಪಾಕಿಸ್ತಾನಿ ಸೇನಾ ಶಿಬಿರದ ಮೇಲೆ ಲೇಸರ್ ಬಾಂಬ್ ದಾಳಿ ನಡೆಸಿದ ರೋಮಾಂಚನಕಾರಿ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಹಾಡಹಗಲೇ ಬೆಂಗಳೂರಿನಲ್ಲಿ ಯುವತಿಯೊಬ್ಬಳ ಅಪಹರಣ (Kidnap case ) ಆಗಿತ್ತು. ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಬಸ್ಗಾಗಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಅಪಹರಣಕೋರರು ಅಪಹರಿಸಿದ್ದಾರೆ.